ನವೆಂಬರ್ ೭ಕ್ಕೆ 'ಕದ ತೆರೆದ ಆಕಾಶ' ಪುಸ್ತಕ ಬಿಡುಗಡೆ

ಹಿರಿಯ ಪತ್ರಕರ್ತ ಮಂಜುನಾಥ್ ಚಾಂದ್ ಅವರ ಕಥಾ ಸಂಕಲನ 'ಕದ ತೆರೆದ ಆಕಾಶ' ಪುಸ್ತಕದ ಬಿಡುಗಡೆ ನವೆಂಬರ್ ೭ ರಂದು ಜರುಗಲಿದೆ.
'ಕದ ತೆರೆದ ಆಕಾಶ' ಪುಸ್ತಕ ಬಿಡುಗಡೆ
'ಕದ ತೆರೆದ ಆಕಾಶ' ಪುಸ್ತಕ ಬಿಡುಗಡೆ
Updated on

ಬೆಂಗಳೂರು: ಹಿರಿಯ ಪತ್ರಕರ್ತ ಮಂಜುನಾಥ್ ಚಾಂದ್ ಅವರ ಕಥಾ ಸಂಕಲನ 'ಕದ ತೆರೆದ ಆಕಾಶ' ಪುಸ್ತಕದ ಬಿಡುಗಡೆ ನವೆಂಬರ್ ೭ ರಂದು ಜರುಗಲಿದೆ.

ಬೆಂಗಳೂರಿನ ಬಸವನಗುಡಿಯಲ್ಲಿರುವ ಬಿ ಪಿ ವಾಡಿಯಾ ಸಭಾಂಗಣದಲ್ಲಿ ಮುಂದಿನ ಶನಿವಾರ ಬೆಳಗ್ಗೆ ೧೦:೩೦ಕ್ಕೆ ಪುಸ್ತಕ ಬಿಡುಗಡೆಯಾಗಲಿದೆ.

ಹಿರಿಯ ಪತ್ರಕರ್ತ ರವಿ ಬೆಳಗೆರೆ ಪುಸ್ತಕ ಬಿಡುಗಡೆ ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ದಿನೇಶ್ ಅಮೀನ್ ಮಟ್ಟು (ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ), ಜೋಗಿ (ಪತ್ರಕರ್ತ, ಸಾಹಿತಿ) ಮತ್ತು ಪ ಸ ಕುಮಾರ್ (ಕಲಾವಿದ) ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಕಾರ್ಯಕ್ರಮಕ್ಕೆ ಎಲ್ಲರಿಗೂ ಮುಕ್ತ ಆಹ್ವಾನವಿದ್ದು, ಭಾಗವಹಿಸುವಂತೆ ಪ್ರಕಾಶನ ಸಂಸ್ಥೆ ಅಕ್ಷರ ಮಂಡಲ ಕೋರಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com