ನವೆಂಬರ್ ೭ಕ್ಕೆ 'ಕದ ತೆರೆದ ಆಕಾಶ' ಪುಸ್ತಕ ಬಿಡುಗಡೆ

ಹಿರಿಯ ಪತ್ರಕರ್ತ ಮಂಜುನಾಥ್ ಚಾಂದ್ ಅವರ ಕಥಾ ಸಂಕಲನ 'ಕದ ತೆರೆದ ಆಕಾಶ' ಪುಸ್ತಕದ ಬಿಡುಗಡೆ ನವೆಂಬರ್ ೭ ರಂದು ಜರುಗಲಿದೆ.
'ಕದ ತೆರೆದ ಆಕಾಶ' ಪುಸ್ತಕ ಬಿಡುಗಡೆ
'ಕದ ತೆರೆದ ಆಕಾಶ' ಪುಸ್ತಕ ಬಿಡುಗಡೆ

ಬೆಂಗಳೂರು: ಹಿರಿಯ ಪತ್ರಕರ್ತ ಮಂಜುನಾಥ್ ಚಾಂದ್ ಅವರ ಕಥಾ ಸಂಕಲನ 'ಕದ ತೆರೆದ ಆಕಾಶ' ಪುಸ್ತಕದ ಬಿಡುಗಡೆ ನವೆಂಬರ್ ೭ ರಂದು ಜರುಗಲಿದೆ.

ಬೆಂಗಳೂರಿನ ಬಸವನಗುಡಿಯಲ್ಲಿರುವ ಬಿ ಪಿ ವಾಡಿಯಾ ಸಭಾಂಗಣದಲ್ಲಿ ಮುಂದಿನ ಶನಿವಾರ ಬೆಳಗ್ಗೆ ೧೦:೩೦ಕ್ಕೆ ಪುಸ್ತಕ ಬಿಡುಗಡೆಯಾಗಲಿದೆ.

ಹಿರಿಯ ಪತ್ರಕರ್ತ ರವಿ ಬೆಳಗೆರೆ ಪುಸ್ತಕ ಬಿಡುಗಡೆ ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ದಿನೇಶ್ ಅಮೀನ್ ಮಟ್ಟು (ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ), ಜೋಗಿ (ಪತ್ರಕರ್ತ, ಸಾಹಿತಿ) ಮತ್ತು ಪ ಸ ಕುಮಾರ್ (ಕಲಾವಿದ) ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಕಾರ್ಯಕ್ರಮಕ್ಕೆ ಎಲ್ಲರಿಗೂ ಮುಕ್ತ ಆಹ್ವಾನವಿದ್ದು, ಭಾಗವಹಿಸುವಂತೆ ಪ್ರಕಾಶನ ಸಂಸ್ಥೆ ಅಕ್ಷರ ಮಂಡಲ ಕೋರಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com