
ಪ್ರತಿ ಬಾರಿಯಂತೆ ಬರುವ ಬೆಳಕಿನ ಹಬ್ಬ ನಿಮ್ಮ ಬದುಕಿನ ಹಬ್ಬವನ್ನು ಕಿತ್ತುಕೊಳ್ಳಬಾರದು. ದೀಪಾವಳಿ ಮನೆಯಲ್ಲಿ ಹೊಸ ಬೆಳಕ ಮೂಡಿಸುತ್ತದೆ. ಆದರೆ, ಇದರ ಆಚರಣೆ ಮಾಡುವಾಗ ಕೆಲವರು ಜೀವನವಿಡೀ ಕತ್ತಲಲ್ಲಿ ಕಳೆಯುವಂತೆ ಮಾಡಿಕೊಳ್ಳುತ್ತಾರೆ.
ಪಟಾಕಿ ಸಿಡಿಸುವ ವೇಳೆ ಜಾಗ್ರತೆ ವಹಿಸಿದರೆ ಮುಂದಾಗಬಹುದಾದ ಅನಾಹುತಗಳನ್ನು ತಪ್ಪಿಸಬಹುದು. ದೀಪಾವಳಿಯಲ್ಲಿ ಹೆಚ್ಚಿನ ಜನ ಪಟಾಕಿ ಸಿಡಿಸಿದ ಘಟನೆಗಳಲ್ಲಿ ಕಣ್ಣಿನ ದೃಷ್ಟಿ ಕಳೆದುಕೊಳ್ಳುತ್ತಿದ್ದಾರೆ. ಜತೆಗೆ ಕಿವಿಯ ತಮಟೆಗೆ ಪೆಟ್ಟಾಗುವುದರಿಂದ ಶಬ್ದ ಗ್ರಹಣ ಶಕ್ತಿ ದುರ್ಬಲ ಸಾಧ್ಯತೆಗಳಿರುತ್ತವೆ. ಮಕ್ಕಳು ಆಸಕ್ತಿ ಮತ್ತು ಖುಷಿಯಿಂದ ಪಟಾಕಿ ಸಿಡಿಸುವ ದಿನ ಸಂಭ್ರಮ ತರಬೇಕೇ ವಿನಃ ಕತ್ತಲ ದಿನವಾಗಿ ಪರಿಣಮಿಸಬಾರದು.
ಹೆಚ್ಚಿನ ಪಟಾಕಿ ದುರಂತಗಳು ಮಕ್ಕಳಲ್ಲಿಯೇ ಕಾಣಿಸಿಕೊಳ್ಳುತ್ತಿವೆ. ಆದ್ದರಿಂದ ಪೋಷಕರು ಮಕ್ಕಳಿಗೆ ಮಾರ್ಗದರ್ಶನ ನೀಡುವ ಜೊತೆಗೆ ಎಚ್ಚರಿಕೆ ವಹಿಸಿದರೆ ಯಾವುದೋ ಒಂದು ಸಂತಸದ ಕ್ಷಣಕ್ಕೆ ಜೀವನಪೂರ್ತಿ ನರಳುವಂತಾಗಬಾರದು. ಇಂತಹ ಸಂತಸಮಯ ಸಂದರ್ಭ ಜೀವನಪೂರ್ತಿ- ಯಾಗಿರಬೇಕು ಎಂದಾದರೆ ಪಟಾಕಿ ಹಚ್ಚುವಾಗ ಎಚ್ಚರಿಕೆ ವಹಿಸಲೇಬೇಕು. ಮಕ್ಕಳು ಪಟಾಕಿ ಸಿಡಿಸುವಾಗ ಹಿರಿಯರು ಜೊತೆಯಲ್ಲಿದ್ದು ಮಾರ್ಗದರ್ಶನ ನೀಡಬೇಕು.
ಪಟಾಕಿ ವಿಚಾರದಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಅನಾಹುತ ಕಟ್ಟಿಟ್ಟ ಬುತ್ತಿ. ಹೀಗೆ ಕಳೆದ ವರ್ಷವೂ ಬೆಂಗಳೂರಿನಲ್ಲಿ 60ಕ್ಕೂ ಹೆಚ್ಚು ಮಕ್ಕಳಿಗೆ ಕಣ್ಣಿಗೆ ಸಂಬಂಧಿಸಿದ ಅನಾಹುತಗಳಾಗಿದ್ದವು. ಈ ಹಿನ್ನೆಲೆಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಸಾರ್ವಜನಿಕರು ಸುರಕ್ಷತೆ ದೃಷ್ಟಿಯಿಂದ ಅನುಸರಿಸಬೇಕಾದ ಕ್ರಮಗಳ ಬಗ್ಗೆ ನಗರ ಪೊಲೀಸ್ ಆಯುಕ್ತರು ಸಲಹೆ ನೀಡಿದ್ದು ರಾತ್ರಿ 10ರಿಂದ ಬೆಳಗ್ಗೆ 6 ಗಂಟೆ ಅವಧಿಯಲ್ಲಿ ಪಟಾಕಿ ಸಿಡಿಸದಂತೆ ಮನವಿ ಮಾಡಿದ್ದಾರೆ.
ಈ ಹಿನ್ನೆಲೆಯಲ್ಲಿ ಪಟಾಕಿ ಸಿಡಿಸುವಾಗ ಹೇಗಿರಬೇಕು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.
ಏನು ಮಾಡಬೇಕು?
Advertisement