ಹೀಗೆಲ್ಲಾ ಅಪಘಾತ ನಡೆಯಲು ಇಲ್ಲಿ ದೆವ್ವ, ಭೂತಗಳ ಕಾಟವೇನೂ ಇಲ್ಲ. ಇಲ್ಲಿರುವುದು ಚತುಷ್ಪಥ. ಯಾವತ್ತೂ ಹಲವಾರು ವಾಹನಗಳು ರೊಯ್ಯನೆ ಓಡಾಡುವ ರಸ್ತೆ. ಇಲ್ಲಿನ ಗ್ರಾಮಸ್ಥರಿಗೆ ಏನೇ ಕೆಲಸ ಕಾರ್ಯಗಳಿದ್ದರೂ ಆ ರಸ್ತೆಯನ್ನು ದಾಟಿಯೇ ಹೋಗಬೇಕು. ಹೀಗೆ ರಸ್ತೆ ದಾಟುವಾಗ ಅಪಘಾತಕ್ಕೆ ಈಡಾಗುವವರು ಈ ಗ್ರಾಮಸ್ಥರೇ. ಮನೆಯ ಅವಶ್ಯಕತೆಗಳಿಗಾಗಿ ಹೊರಗೆ ಹೋಗುವವರು ಪುರುಷರೇ ಆಗಿದ್ದ ಕಾರಣ, ಪುರುಷರೇ ರಸ್ತೆ ಅಪಘಾತಕ್ಕೆ ಬಲಿಯಾಗಿದ್ದಾರೆ.