ಭಾರತೀಯ ಗಣ್ಯರಿಗೆ ಕೂಡ ನೊಬೆಲ್ ಪ್ರಶಸ್ತಿ ಸಂದಾಯವಾಗಿದೆ. ರವೀಂದ್ರನಾಥ ಠಾಗೋರ್ ಅವರಿಗೆ ಸಾಹಿತ್ಯದಲ್ಲಿ 1913ರಲ್ಲಿ, ಸರ್. ಸಿ. ವಿ. ರಾಮನ್ ರಿಗೆ ಭೌತಶಾಸ್ತ್ರದಲ್ಲಿ 1930ರಲ್ಲಿ, ಡಾ. ಹರಗೋಬಿಂದ ಖುರಾನರಿಗೆ ವೈದ್ಯಶಾಸ್ತ್ರದಲ್ಲಿ 1968ರಲ್ಲಿ, ಮದರ್ ತೆರೇಸಾರಿಗೆ ಶಾಂತಿ ಪ್ರಶಸ್ತಿ 1979ರಲ್ಲಿ, ಸುಬ್ರಮಣ್ಯಮ್ ಚಂದ್ರಶೇಖರ್ ಅವರಿಗೆ ಭೌತಶಾಸ್ತ್ರದಲ್ಲಿ 1983ರಲ್ಲಿ, ಅಮರ್ತ್ಯ ಸೇನ್ ರಿಗೆ ಅರ್ಥಶಾಸ್ತ್ರದಲ್ಲಿ 1998ರಲ್ಲಿ, ಡಾ. ರಾಜೇಂದ್ರಕುಮಾರ್ ಪಚೌರಿಯವರ 'ಪರಿಸರ ಸಂರಕ್ಷಣೆಗಾಗಿ,' 'ನೋಬೆಲ್ ಶಾಂತಿಪ್ರಶಸ್ತಿ' 2007ರಲ್ಲಿ, ವೆಂಕಟರಾಮನ್ ರಾಮಕೃಷ್ಣನ್ ರಿಗೆ ರಸಾಯನಶಾಸ್ತ್ರದಲ್ಲಿ 2009ರಲ್ಲಿ, 2014ರಲ್ಲಿ ಗಾಂಧಿವಾದಿ, ಮಕ್ಕಳ ಹಕ್ಕುಗಳಿಗಾಗಿ ಹೋರಾಡುವ ಕೈಲಾಶ್ ಸತ್ಯರ್ಥಿಯವರಿಗೆ ನೊಬೆಲ್ ಶಾಂತಿ ಪುರಸ್ಕಾರ ಲಭಿಸಿತ್ತು. ಇದುವರೆಗೆ 9 ಮಂದಿ ಭಾರತೀಯರಿಗೆ ವಿವಿಧ ಕ್ಷೇತ್ರಗಳಲ್ಲಿ ನೊಬೆಲ್ ಪ್ರಶಸ್ತಿ ಸಿಕ್ಕಿದೆ.