ನೀವಾಗಿ ನೀದದಿದ್ದರೆ ಬಲವಂತವಾಗಿ ಜಮೀನನ್ನು ಬರೆಸಿಕೊಳ್ಳುತ್ತೇವೆ, ನಮಗೆ ಪೋಲೀಸರು, ಮೇಲಾಧಿಕಾರಿಗಳ ಬೆಂಬಲವಿದೆ ಎಂದು ಅಜೀಜ ಬೆದರಿಕೆಯೊಡ್ಡಿದ್ದನು. ಇಷ್ಟು ಸಾಲದೆನ್ನುವಂತೆ ಜಮೀನಿನ ಹೆಸರಿನಲ್ಲಿ ಸುಳ್ಳು ಕಾಗದ ಪತ್ರ ತಯಾರಿಸಿ ನಕಲಿ ಸಹಿ ಮಾಡಿದ್ದಾರೆ. 'ನಾನು ಹಾಗೂ ನನ್ನ ಅಕ್ಕ ಅಪ್ರಾಪ್ತ ವಯಸ್ಕರಾಗಿದ್ದು ಜಮೀನು ಮಾರಾಟಕ್ಕೆ ನಾವುಗಳು ಒಪ್ಪಿದ್ದೇವೆಂದು ಪತ್ರದಲ್ಲಿ ಸುಳ್ಳು ಮಾಹಿತಿ ನೀಡಲಾಗಿದೆ. ನಮ್ಮ ಮನೆಗೆಲಸ ಮಾಡಿ ನಮ್ಮನ್ನು ಓದಿಸುತ್ತಿದ್ದು ನಿತ್ಯದ ಜೀವನವೇ ಕಷ್ಟಕರವಾಗಿದೆ. ನಮ್ಮ ಕುಟುಂಬಕ್ಕೆ ಯಾವುದೇ ಅಪಾಯ ಒದಗಿದರೆ ಅದಕ್ಕೆ ಅಜೀಜ್ ಸಾಬ್ ಹಾಗೂ ಅವರ ನಿಕಟವರ್ತಿಗಳು ಕಾರಣ. ನಮಗೆ ನ್ಯಾಯ ದೊರಕಿಸಿ.'