ಐಟ್ ಸಿಟಿ ಬೆಂಗಳೂರಿನ ಸ್ಥಿತಿ ಇಂದಿಗೆ ಹೀನಾಯವಾಗಿದೆ, 60 ಲಕ್ಷಕ್ಕೂ ಹೆಚ್ಚು ವಾಹನ ಚಾಲಕರು ಇದೇ ಕಳಪೆ ರಸ್ತೆಗಳಲ್ಲಿ ತಮ್ಮ ಜೇವವನ್ನು ಒತ್ತೆ ಇಟ್ಟು ಪ್ರಯಾಣಿಸುತ್ತಾರೆ. ಎಲ್ಲಿ, ಯಾವ ಗುಂಡಿಗೆ ತಮ್ಮ ಕಾರೋ, ಬೈಕೋ ಸಿಕ್ಕಿ, ಬಿದ್ದು ಜೀವ ಕಳೆದುಕೊಳ್ಳುತ್ತೀವಿ ಅನ್ನೋ ಭಯದಲ್ಲಿ ಮನೆ ಬಿಡಬೇಕಾದರೆ ದೇವ್ರಿಗೆ ಪೂಜೆ ಮಾಡೋ ಪ್ರಮೇಯ ಇಂದಿಗೆ ನಮಗೆ ಬಂದಿದೆ. ಒಂದಷ್ಟು ಮಳೆ ಸುರಿದರೆ ಸಾಕು ನಮ್ಮ ರಸ್ತೆಗಳು ಹಿಮಾಲಯದ ಗಡಿ ಪ್ರದೇಶದ ರಸ್ತೆಗಳಂತೆ ಬಾಂಬುಕುಳಿಗಳು(Crater) ಬೀಳುವುದು ಖಚಿತ, ಇದಲ್ಲದೆ BWSSB, ಮೆಟ್ರೋ ಕಾಮಗಾರಿ, ಕೇಬಲ್ wiring, ಹೀಗೆ ಹಲವಾರು ವಿಭಾಗಗಳು ಈ ರೋಗಕ್ಕೆ ತಮ್ಮದೇ ಆದ ಶೈಲಿಯಲ್ಲಿ ಸಹಾಯಮಾಡಿದ್ದಾರೆ.