ಉತ್ತರದಲ್ಲೂ ಪ್ರಭಾವ ಹೊಂದಿತ್ತು ಕರ್ನಾಟಕದ ರಾಷ್ಟ್ರಕೂಟರ ಸಾಮ್ರಾಜ್ಯ!

ಕರ್ನಾಟಕದ ಇತಿಹಾಸದಲ್ಲಿ ಕದಂಬ, ಗಂಗ, ಚಾಲುಕ್ಯ, ಹೊಯ್ಸಳಾದಿಯಾಗಿ ಅನೇಕ ಸಾಮ್ರಾಜ್ಯಗಳು ಆಳ್ವಿಕೆ ನಡೆಸಿವೆ. ಈ ಪೈಕಿ ರಾಷ್ಟ್ರಕೂಟ ಸಾಮ್ರಾಜ್ಯವೂ ಪ್ರಮುಖವಾದದ್ದು.
ಉತ್ತರದಲ್ಲೂ ಪ್ರಭಾವ ಹೊಂದಿತ್ತು ಕರ್ನಾಟಕದ ರಾಷ್ಟ್ರಕೂಟರ ಸಾಮ್ರಾಜ್ಯ!
Updated on
ಕರ್ನಾಟಕದ ಇತಿಹಾಸದಲ್ಲಿ ಕದಂಬ, ಗಂಗ, ಚಾಲುಕ್ಯ, ಹೊಯ್ಸಳಾದಿಯಾಗಿ ಅನೇಕ ಸಾಮ್ರಾಜ್ಯಗಳು ಆಳ್ವಿಕೆ ನಡೆಸಿವೆ. ಈ ಪೈಕಿ ರಾಷ್ಟ್ರಕೂಟ ಸಾಮ್ರಾಜ್ಯವೂ ಪ್ರಮುಖವಾದದ್ದು. 
ರಾಷ್ಟ್ರಕೂಟರ ಕಾಲದಲ್ಲಿ ಕನ್ನಡದಲ್ಲಿ ಹಲವಾರು ರೀತಿಯ ರಚನೆಗಳು ಇದ್ದವೆಂದು ತಿಳಿದುಬಂದಿದ್ದು, ಸಾಹಿತ್ಯಕ್ಕೆ ಹೆಚ್ಚಿನ ಮನ್ನಣೆ ನೀಡಿದ್ದರು. ರಾಷ್ಟ್ರಕೂಟರ ಆಳ್ವಿಕೆಯಲ್ಲಿ ಈ ಪ್ರಾಂತ್ಯದ ಭಾಷೆಯನ್ನು ತಿರುಳುಗನ್ನಡವೆಂದೇ ಹೇಳುತ್ತಿದ್ದದ್ದು ಗಮನಾರ್ಹ. 5 ನೇ ಶತಮಾನದ ಕನ್ನಡದ ಶಾಸನದ ನಂತರದಲ್ಲಿ ಪ್ರಥಮವಾಗಿ ರಚಿತವಾಗಿರುವ ಕವಿರಾಜಮಾರ್ಗದಲ್ಲಿ ಕಾವೇರಿಯಿಂದ ಗೋದಾವರಿಯವರೆಗೆ ಇದ್ದ ನಾಡು ಕನ್ನಡನಾಡು ಎಂದು ಉಲ್ಲೇಖಿಸಲಾಗಿದೆ. 
ಕವಿರಾಜಮಾರ್ಗದಲ್ಲಿ ಉಲ್ಲೇಖವಾಗಿರುವಂತೆಯೇ ಅಂದಿನ ರಾಷ್ಟ್ರಕೂಟದ ಸಾಮ್ರಾಜ್ಯದ ಕನ್ನಡದ ಸಾಮ್ರಾಜ್ಯ ಉತ್ತರದ ತುದಿಯವರೆಗೂ ಹರಡಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com