ಮುದ್ರಾಡಿಯ ಗಂಗಾಧರ ಶೆಟ್ಟಿಯವರದು ದೊಡ್ಡ ಕುಟುಂಬ. ಅವರು ಮುಂಬೈನಲ್ಲಿ ಟ್ರಾನ್ಸ್ ಪೋರ್ಟ್, ಶೋರೂಂ ಉದ್ಯಮ ನಡೆಸುತ್ತಿದ್ದಾರೆ.ಅವರು ಬಹಳ ವರ್ಷದ ಬಳಿಕ ಮುದ್ರಾಡಿಯಲ್ಲಿ ಹೊಸದಾಗಿ ಮನೆ ಕಟ್ಟಿಸಿದ್ದರು. ಆದರೆ ಮನೆ ಕಟ್ಟಿಸಿದಾಗಿನೊಂದ ಅವರಿಗೆ ಅಲ್ಲಿ ನೆಮ್ಮದಿಯಾಗಿರಲು ಸಾಧ್ಯವಾಗಿರಲಿಲ್ಲ. ಕಡೆಗೆ ಉದ್ಯಮ, ವ್ಯವಹಾರದಲ್ಲಿ ಸಹ ನಷ್ಟಗಳು ಕಾಣಿಸಿಕೊಳ್ಳುವುದಕ್ಕೆ ಪ್ರಾರಂಭವಾಗಿತ್ತು.