ಇಲ್ಲಿನ ಬುಡಕಟ್ಟು ನಿವಾಸಿಗಳನ್ನು ತಲುಪಲು ಭಾರತ ಸರ್ಕಾರ ಈ ಹಿಂದೆ ಹಲವು ಪ್ರಯತ್ನಗಳನ್ನು ಮಾಡಿತ್ತಾದರೂ ಎಲ್ಲವೂ ವಿಫಲವಾಗಿವೆ. ಕೆಲ ಸಮಾಜಶಾಸ್ತ್ರ ತಜ್ಞರ ಪ್ರಕಾರ ಇಲ್ಲಿನ ನಿವಾಸಿಗಳು ಮೂಲ ನಿವಾಸಿಗಳಲ್ಲ. ಬದಲಿಗೆ ಆಫ್ರಿಕಾದಿಂದ ವಲಸೆ ಬಂದು ಇಲ್ಲಿ ನೆಲೆಸಿದ್ದಾರೆ. ಇಲ್ಲಿ ಇಂದಿಗೂ ಹೊರಗಿನವರಿಗೆ ಅಕ್ಷರಶಃ ನಿರ್ಬಂಧ ಹೇರಲಾಗಿದೆ. ಒಂದು ವೇಳೆ ಯಾರಾದರೂ ದ್ವೀಪಕ್ಕೆ ಬರುವ ಪ್ರಯತ್ನ ಮಾಡಿದರೆ ಅವರಿಗೆ ಅಪಾಯ ಕಟ್ಟಿಟ್ಟಬುತ್ತಿ, ರಾಜಧಾನಿ ಪೋರ್ಟ್ ಬ್ಲೇರ್ ನಿಂದ ಕೇವಲ 50 ಕಿ.ಮೀ ದೂರದಲ್ಲಿದ್ದರೂ, ಇಂದಿಗೂ ಇವರು ಹೊರಜಗತ್ತಿಗೆ ಪರಿಚಿತರಲ್ಲ. ಈ ದ್ವೀಪದಲ್ಲಿ ಇವರ ಸಂಖ್ಯೆ ಕನಿಷ್ಟ 40 ರಿಂದ ಗರಿಷ್ಟ 150 ಸಂಖ್ಯೆಗಳಿಲ್ಲಿವೆ ಅಷ್ಟೇ..