ಬರಾಹ್ಪುಲ್ಲಾ ಸೇರಿದಂತೆ ರಸ್ತೆ ಮೂಲಸೌಕರ್ಯ, ಗಾಂಧಿ ನಗರದಿಂದ ನೋಯ್ಡಾ ನಡುವಿನ ಸಿಗ್ನಲ್ ಮುಕ್ತ ಕಾರಿಡಾರ್, ಏಮ್ಸ್ ಫ್ಲೈಓವರ್-ಎಲಿವೇಟೆಡ್ ರೋಡ್ ನೆಟ್ವರ್ಕ್, ಐಟಿಒ ಫ್ಲೈಓವರ್, ರಾಜ್ಘಾಟ್ ರಿಂಗ್ ರೋಡ್ ಮತ್ತು ಟ್ರಾನ್ಸ್ ಯಮುನಾ ಪ್ರದೇಶದ ಎಲ್ಲಾ ಫ್ಲೈಓವರ್, ಮೇಲು ರಸ್ತೆ ಅಭಿವೃದ್ಧಿ ಶೀಲಾ ಅವರ ಸಾಧನೆಯಾಗಿದೆ. "ಆಗಿನ ರೈಲ್ವೆ ಸಚಿವರು ಮತ್ತು ಸಂಸ್ಕೃತಿ ಸಚಿವರು ಬರಾಪುಲ್ಲಾ ಎಲಿವೇಟೆಡ್ ಕಾರಿಡಾರ್ ಹುಮಾಯೂನ್ ಸಮಾಧಿಯ ಸಮೀಪ ಹಾದುಹೋಗುತ್ತಿದ್ದ ಕಾರಣ ಬಲವಾಗಿ ವಿರೋಧಿಸಿದ್ದರು.ಅದೊಂದು ಸಂರಕ್ಷಿತ ಸ್ಮಾರಕವಾಗಿದೆ ಎಂಬ ಕಾರಣಕ್ಕೆ ಅವರು ಆಕ್ಷೇಪಿಸಿದ್ದರು. ಆದರೆ ಶೀಲಾ ದೀಕ್ಷಿತ್ ತಮ್ಮ ದಾರಿಯಲ್ಲೇ ಸಾಗಿದರು. ಆಕೆ ಎಲ್ಲರ ಮನವೊಲಿಸಿದರು. ಇದು ಜನತೆಗೆ ಅನುಕೂಲ ಕಲ್ಪಿಸುವ ಮಹತ್ವದ ಯೋಜನೆ ಎಂಬುದಾಗಿ ಅವರು ತಿಳಿದಿದ್ದರು. ಅಲ್ಲದೆ ನಗರ ಸಂಚಾರ ದಟ್ಟಣೆಗೆ ಇದು ಪರಿಹಾರವಾಗಲಿದೆ ಎಂದೂ ಅವರು ಗೊತ್ತುಮಾಡಿಕೊಂಡಿದ್ದರು"ಮೆಹ್ತಾ ಹೇಳಿದರು.