ವಿಜಯವಾಡ: ಅನಾರೋಗ್ಯ ಪೀಡಿತ ಬೀದಿ ನಾಯಿಗಳಿಗೆ ವೈದ್ಯಕೀಯ ನೆರವು ಕಲ್ಪಿಸುವ ಪ್ರಾಣಿಪ್ರಿಯ ವೆಂಕಟೇಶ್ವರಲು!

ಆಂಧ್ರ ಪ್ರದೇಶದ 71 ವರ್ಷದ ಮುರುಳ ವೆಂಕಟೇಶ್ವರಲು ವಿಜಯವಾಡದಲ್ಲಿರುವ ತನ್ನ ವಿಶಿಷ್ಠ ಆಶ್ರಮದಲ್ಲಿ ಅನಾರೋಗ್ಯಕ್ಕೊಳಗಾದ ಬೀದಿನಾಯಿಗಳಿಗೆ ವೈದ್ಯಕೀಯ ನೆರವು ನೀಡುತ್ತಾ ಬಂದಿದ್ದಾರೆ.
ಮುರುಳ ವೆಂಕಟೇಶ್ವರಲು
ಮುರುಳ ವೆಂಕಟೇಶ್ವರಲು
Updated on

ವಿಜಯವಾಡ: ಆಂಧ್ರ ಪ್ರದೇಶದ 71 ವರ್ಷದ ಮುರುಳ ವೆಂಕಟೇಶ್ವರಲು ವಿಜಯವಾಡದಲ್ಲಿರುವ ತನ್ನ ವಿಶಿಷ್ಠ ಆಶ್ರಮದಲ್ಲಿ ಅನಾರೋಗ್ಯಕ್ಕೊಳಗಾದ ಬೀದಿನಾಯಿಗಳಿಗೆ ವೈದ್ಯಕೀಯ ನೆರವು ನೀಡುತ್ತಾ ಬಂದಿದ್ದಾರೆ. ಈ ಆಶ್ರಮದಲ್ಲಿ ನಾಯಿಗಳಿಗೆ ಬೇಕಾದ ಎಲ್ಲಾ ರೀತಿಯ ಔಷಧಗಳು ಲಭ್ಯವಿದ್ದು, ಅನಾರೋಗ್ಯ ಪೀಡಿತ ನಾಯಿಗಳಿಗೆ ವೈದ್ಯಕೀಯ ನೆರವು ನೀಡಲಾಗುತ್ತದೆ. 

ಮುರುಳ ವೆಂಕಟೇಶ್ವರಲು ಐದು ವರ್ಷದ ಬಾಲಕನಾಗಿದ್ದಾಗಿನಿಂದ ಈ ಕೆಲಸವನ್ನು ಮಾಡುತ್ತಾ ಬಂದಿದ್ದಾರೆ. ಆರಂಭದಲ್ಲಿ ತುಂಬಾ ಆರ್ಥಿಕ ಸಮಸ್ಯೆಯನ್ನು ಎದುರಿಸಿದ್ದೆ, ನನ್ನು ಇಡೀ ಆದಾಯವನ್ನು ನಾಯಿಗಳಿಗೆ ವೈದ್ಯಕೀಯ ವೆಚ್ಚಕ್ಕಾಗಿ ವೆಚ್ಚ ಮಾಡುತ್ತಿದ್ದಾಗಿ ತಿಳಿಸಿದ್ದಾರೆ.

ಈಗ ಜನರು ಕೂಡಾ ಪ್ರೇರಿತರಾಗಿದ್ದು, ದೇಣಿಗೆಯನ್ನು ಸ್ವೀಕರಿಸುತ್ತಿದ್ದೇವೆ, ಪ್ರತಿ ತಿಂಗಳು ಸುಮಾರು 80 ಸಾವಿರದಿಂದ 1 ಲಕ್ಷ ರೂ. ವರೆಗೂ ದೇಣಿಗೆ ಬರುತ್ತಿದೆ. ಜನರು ಕೂಡಾ ಅನಾರೋಗ್ಯದಿಂದ ಬಳಲುತ್ತಿರುವ ನಾಯಿಗಳನ್ನು ತರುತ್ತಿರುವುದಾಗಿ ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com