social_icon

ಕೀನ್ಯಾದ ಮಸಾಯಿ ಮರಾವನ್ನೂ ಮೀರಿಸುವಂತಿದೆ ರಾಜ್ಯದ ಭದ್ರಾ ಮೀಸಲು ಅರಣ್ಯ!

ಮಸಾಯಿ ಮರಾ ಜಗತ್ತಿನ ಖ್ಯಾತ ವನ್ಯಜೀವಿ ಮೀಸಲು ಪ್ರದೇಶ. ಅರಣ್ಯ ಮೃಗಗಳ ಸ್ವರ್ಗವೆಂದೇ ಹೇಳಲಾಗುವ ಈ ಮಸಾಯಿ ಮರಾವನ್ನೂ ಕೂಡ ಮೀರಿಸುವಂತಹ ಸೊಬಗು ನಮ್ಮದೇ ಆದ ಭದ್ರಾ ಹುಲಿ ಸಂರಕ್ಷಿತಾರಣ್ಯದಲ್ಲಿದೆ. 

Published: 12th July 2021 01:30 AM  |   Last Updated: 12th July 2021 06:05 PM   |  A+A-


Greening the grasslands

ಭದ್ರಾ ಮೀಸಲು ಅರಣ್ಯ ಪ್ರದೇಶ

The New Indian Express

ಬೆಂಗಳೂರು: ಮಸಾಯಿ ಮರಾ ಜಗತ್ತಿನ ಖ್ಯಾತ ವನ್ಯಜೀವಿ ಮೀಸಲು ಪ್ರದೇಶ. ಅರಣ್ಯ ಮೃಗಗಳ ಸ್ವರ್ಗವೆಂದೇ ಹೇಳಲಾಗುವ ಈ ಮಸಾಯಿ ಮರಾವನ್ನೂ ಕೂಡ ಮೀರಿಸುವಂತಹ ಸೊಬಗು ನಮ್ಮದೇ ಆದ ಭದ್ರಾ ಹುಲಿ ಸಂರಕ್ಷಿತಾರಣ್ಯದಲ್ಲಿದೆ. 

ಭದ್ರಾ ಹುಲಿ ಸಂರಕ್ಷಿತಾರಣ್ಯದಲ್ಲಿ ಬೆಳೆದಿರುವ ಹುಲ್ಲುಗಾವಲು ಪ್ರದೇಶ ಜಗತ್ತಿನ ಯಾವುದೇ ಪ್ರವಾಸಿ ತಾಣಗಳಿಗೂ ಕಡಿಮೆ ಇಲ್ಲದಂತೆ ಪ್ರವಾಸಿಗರನ್ನು ಸೆಳೆಯುತ್ತಿದೆ. ಹ್ಯಾಡ್ಲಸ್ ಎಂದು ಕರೆಯಲ್ಪಡುವ ಈ ತೇವಾಂಶವುಳ್ಳ ಪುನಃಸ್ಥಾಪಿಸಿದ ಹುಲ್ಲುಗಾವಲುಗಳು ಈಗ ಗೌರ್ಸ್, ಮಚ್ಚೆಯುಳ್ಳ ಜಿಂಕೆಗಳು, ಸಾಂಬಾರ್  ಮತ್ತು ಇತರ ಹಲವು ಜಾತಿ ಪ್ರಾಣಿಗಳ ಆಗರವಾಗಿದ್ದು, ಇವುಗಳ ವೀಕ್ಷಣೆಗೆ ಪ್ರವಾಸಿಗರ ದಂಡೇ ಹರಿಯುತ್ತಿದೆ. 

ಈ ಹಿಂದೆ ಲಂಟಾನಾ, ಯುಪಟೋರಿಯಂ ಮತ್ತು ಇತರ ವಿಲಕ್ಷಣ ವಿದೇಶಿ ಕಳೆಗಳ ಆಕ್ರಮಣದಿಂದ ನಾಶವಾಗಿದ ಈ ಆವಾಸಸ್ಥಾನವನ್ನು ನೂರಾರು ಅರಣ್ಯ ಸಿಬ್ಬಂದಿಗಳು ಸತತ ಎರಡು ವರ್ಷಗಳ ಕೆಲಸದ ನಂತರ ಪುನಃಸ್ಥಾಪಿಸಿದ್ದಾರೆ. ಒಟ್ಟಾರೆಯಾಗಿ, 300 ಹೆಕ್ಟೇರ್ ಹುಲ್ಲುಗಾವಲುಗಳನ್ನು ಪುನಃಸ್ಥಾಪಿಸಲಾಗಿದೆ.  ಹುಲ್ಲುಗಾವಲಿನ ಹಿಂದೆ ಬೆಟ್ಟಗುಡ್ಡಗಳಿರುವುದು ಈ ಹುಲ್ಲುಗಾವಲಿನ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ.

ಈ ಹಿಂದೆ ಅಂದರೆ 2002ರಲ್ಲಿ ಇಲ್ಲಿ ವಾಸವಿದ್ದ ಜನರನ್ನು ತೆರವುಗೊಳಿಸಲಾಗಿತ್ತು. ಇಲ್ಲಿ ಹಲವು ದಶಕಗಳಿಂದ ಸುಮಾರು 431 ಕುಟುಂಬಗಳು ವಾಸವಿದ್ದವು. ಫಲವತ್ತಾದ ಹುಲ್ಲುಗಾವಲಿನಲ್ಲಿ ಸ್ಥಳೀಯರು ಭತ್ತ ಬೆಳೆಯುತ್ತಿದ್ದರು. ಗ್ರಾಮದ ಸುಮಾರು 98 ಕುಟುಂಬಗಳು ಅಲ್ಲದೆ ಸುತ್ತಮುತ್ತಲಿನ ಗ್ರಾಮಗಳಾದ ಮುತೋಡಿ  ಶ್ರೇಣಿಯ ಕೇಶವದಿಂದ 60 ಮತ್ತು ಹೆಬ್ಬೆ ವ್ಯಾಪ್ತಿಯ ಮಡ್ಲಾ ಗ್ರಾಮದಿಂದ 159 ಕುಟುಂಬಗಳು ಸೇರಿದ್ದ ಇಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದವು. ಪ್ರಾಣಿ ಸಂಕುಲಕ್ಕೆ ಬೆದರಿಕೆ ಹಿನ್ನಲೆಯಲ್ಲಿ ಇಲ್ಲಿನ ಸ್ಥಳೀಯರನ್ನು ತೆರವುಗೊಳಿಸಬೇಕು ಎಂದು ಕಳೆದ ಕೆಲ ದಶಕಗಳಿಂದ ಎನ್ ಜಿಒಗಳು ಮತ್ತು ಕೆಲ ಪ್ರಾಣಿಪರ  ಸಂಘಟೆನಗಳು ಪ್ರಯತ್ನಿಸುತ್ತಿದ್ದವು. 2002ರಲ್ಲಿ ಗ್ರಾಮಸ್ಥರು ಸ್ವಪ್ರೇರಣಿಯಿಂದ ಹೊಸ ಸ್ಥಳಕ್ಕೆ ಸ್ಥಳಾಂತರಗೊಂಡಿದ್ದಾರೆ. ಇದರಿಂದ ಪ್ರಾಣಿ ಮತ್ತು ಮಾನವರ ನಡುವಿನ ಸಂಘರ್ಷ ಗಣನೀಯವಾಗಿ ಕುಸಿದಿದೆ.

ಇದೀಗ ಇದೇ ಜಾಗದಲ್ಲಿ ದಟ್ಟಾರಣ್ಯ ಬೆಳೆದಿದೆಯಾದರೂ, ಕಳೆದ 4-5 ವರ್ಷಗಳಲ್ಲಿ ವಿಲಕ್ಷಣ ಕಳೆಗಳು ಬೆಳೆದು ಜೇಡಗಳು ಸಹ ವ್ಯಾಪಕವಾಗಿ ಬೆಳೆಯುತ್ತಿವೆ. ಇನ್ನು ಈ ಕಳೆಗಳು ಹ್ಯಾಡ್ಲಸ್‌ನ ನೈಸರ್ಗಿಕ ಹುಲ್ಲು ಬೆಳೆಯುವ ಸಾಮರ್ಥ್ಯಕ್ಕೂ ತೊಂದರೆ ಕೊಡುತ್ತವೆ. ಇದರಿಂದ ವನ್ಯಜೀವಿ ಜೀವನದ ಮೇಲೆ  ಅಡ್ಡಪರಿಣಾಮ ಬೀರುತ್ತದೆ. ಈ ಕಳೆಗಳ ಹರಡುವಿಕೆಯನ್ನು ನಿವಾರಿಸಲು ಹೊಸ ಕಾರ್ಯತಂತ್ರವನ್ನು ರೂಪಿಸಿದ ರಾಜ್ಯ ಅರಣ್ಯ ಇಲಾಖೆಯು 2019 ರಲ್ಲಿ ಪುನಃಸ್ಥಾಪನೆ ಕಾರ್ಯವನ್ನು ಪ್ರಾರಂಭಿಸಿತು. ಅರಣ್ಯ ಸಿಬ್ಬಂದಿಗಳು ಮಳೆಗಾಲದಲ್ಲಿ ಲಕ್ಷಾಂತರ ಕಳೆಗಳನ್ನು ಕೈಯಾರೆ ಬೇರುಸಹಿತ ಕಿತ್ತುಹಾಕಿದರು.  ಮಳೆಗಾಲದಲ್ಲಿ ಈ ಕೆಲಸ ಕಠಿಣವಾಗಿತ್ತು. ಈ ಜೌಗು ಪ್ರದೇಶಗಳಿಂದ ಶೇ.70-90 ರಷ್ಟು ಕಳೆಗಳನ್ನು ತೆರವುಗೊಳಿಸಲು ಸಾಧ್ಯವಾದ ಕಾರಣ ಇಲ್ಲಿ ಇದೀಗ ಹುಲ್ಲುಗಾವಲು ಬೆಳೆಯುತ್ತಿದೆ.   

ಭದ್ರಾ ಹುಲಿ ಮೀಸಲು ನಿರ್ವಹಣಾ ಯೋಜನೆಯ ಪ್ರಕಾರ, ಆಗ ನಿರ್ದೇಶಕ ತಕಥ್ ಸಿಂಗ್ ರಣಾವತ್ ಮತ್ತು ಚಿಕ್ಕಮಗಲೂರು ಅರಣ್ಯ ಸಂರಕ್ಷಣಾಧಿಕಾರಿ ಸುನಿಲ್ ಪನ್ವಾರ್ ಅವರು ಹುಲಿ ಸಂರಕ್ಷಣಾ ಪ್ರತಿಷ್ಠಾನ ನಿಧಿ ಮತ್ತು ಎನ್‌ಟಿಸಿಎಯಿಂದ ಹಣ ಸಹಭಾಗಿತ್ವದೊಂದಿಗೆ ಈ ಪ್ರಕ್ರಿಯೆಯನ್ನು ಪ್ರಾರಂಭಿಸಿದರು.  ಎರಡು ವರ್ಷಗಳ ಪ್ರಯತ್ನಗಳು ಉತ್ತಮ ಫಲಿತಾಂಶಗಳನ್ನು ತೋರಿಸಿವೆ, ಹುಲ್ಲುಗಾವಲುಗಳು  ವೇಗವಾಗಿ ಬೆಳೆದಿದ್ದು, ಪರಿಣಾಮ ಇಲ್ಲಿ ಸಸ್ಯಹಾರಿ ಜೀವಿಗಳು ನಿರಂತರವಾಗಿ ಭೇಟಿ ನೀಡಲು ಆರಂಭಿಸಿವೆ.

ಈ ಬಗ್ಗೆ ಮುತೋಡಿ ಶ್ರೇಣಿಯ ರೇಂಜ್ ಆಫೀಸರ್ ಲೋಕೇಶ್ ಬಿಲಾವಲ ಅವರು ಮಾತನಾಡಿ, ಈಗಾಗಲೇ ಸುಮಾರು 200 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಲಾಂಟಾನಾವನ್ನು ತೆರವುಗೊಳಿಸಲಾಗಿದ್ದು, ಈ ಪ್ರದೇಶದಲ್ಲಿ ಹುಲ್ಲುಗಾವಲು ಬೆಳೆಯಲು ಇದು ನೆರವಾಗಿದೆ. ಇದನ್ನು ಸಾಧಿಸಲು ನಮ್ಮ ಕ್ಷೇತ್ರ ಸಿಬ್ಬಂದಿ ದಣಿವರಿಯಿಲ್ಲದೆ ಕೆಲಸ ಮಾಡಿದ್ದಾರೆ. ಇಲ್ಲಿ ಒಂದು ಪ್ರಯೋಜನವೆಂದರೆ ಡೀವಿಂಗ್ ಪ್ರಕ್ರಿಯೆಯ ನಂತರ, ಹುಲ್ಲು ನೈಸರ್ಗಿಕವಾಗಿ ಪುನಶ್ಚೇತನಗೊಳ್ಳುತ್ತದೆ. ಕಳೆದ ಒಂದು ತಿಂಗಳಿನಿಂದ, ಮಳೆ ಪ್ರಾರಂಭವಾದಾಗಿನಿಂದ, ಇಡೀ ಪ್ರದೇಶವು ಹಸಿರು ಕಾರ್ಪೆಟ್ ಆಗಿ ಮಾರ್ಪಟ್ಟಿದೆ. ಕಾಡಿನ ಜೀರ್ಣೋದ್ಧಾರ ಕಾರ್ಯವು  ನಿರಂತರ ಪ್ರಕ್ರಿಯೆಯಾಗಿದ್ದು, ಶ್ರೇಣಿಯ ಅಧಿಕಾರಿಗಳನ್ನು ಸೇರಿಸಿ. "ನಾವು ನಿರ್ವಹಣೆಯನ್ನು ನಿರ್ವಹಿಸದಿದ್ದರೆ, ಪ್ರಾಣಿಗಳು ಹಿಂದಿರುಗುತ್ತವೆ ಎಂದು ಆತಂಕ ವ್ಯಕ್ತಪಡಿಸಿದರು.  
 
ಪಕ್ಕದ ಹೆಬ್ಬೆ ಶ್ರೇಣಿಯಲ್ಲಿ, 159 ಕುಟುಂಬಗಳು ಮಡ್ಲಾದ ನಾಲ್ಕು ಹಳ್ಳಿಗಳಲ್ಲಿ ಭತ್ತ ಬೆಳೆಯುತ್ತಿದ್ದರು. ಆದರೆ 2002 ರಲ್ಲಿ ಅವರ ಸ್ಥಳಾಂತರದೊಂದಿಗೆ, ಭೂಮಿಯನ್ನು ಕೈಬಿಡಲಾಗಿತ್ತು. ಇಲ್ಲಿ ಸರಿಯಾದ ನಿರ್ವಹಣೆ ಇಲ್ಲದೇ ಲ್ಯಾಂಟಾನಾ ಮತ್ತು ಯುಪಟೋರಿಯಂ ಕಳೆಗಳು ಬೆಳೆದು ನಿಂತಿದ್ದವು, ನಾಲ್ಕು ವರ್ಷಗಳ ಹಿಂದೆ ಡೀವಿಂಗ್ ಮಾಡಲು ಪ್ರಾರಂಭಿಸಿದೆವು. ಈದೀಗ ನಾವು 70 ಪ್ರತಿಶತದಷ್ಟು ಕಳೆಗಳನ್ನು ತೆರವುಗೊಳಿಸಿದ್ದೇವೆ ಮತ್ತು ಉಳಿದವು ನಿರ್ಮೂಲನೆಗೆ ಇನ್ನೂ ಕೆಲವು ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಯಾವುದೇ ಬೀಜಗಳು ಚದುರಿಹೋಗದ ರೀತಿಯಲ್ಲಿ ಬೇರುಸಹಿತ ಕಿತ್ತುಹಾಕಬೇಕಿದೆ, ಏಕೆಂದರೆ ಅವು  ಮಳೆಗಾಲದಲ್ಲಿ ಮತ್ತೆ ಬೇರುಬಿಡಬಹುದು ಎಂದು ಅವರು ಹೇಳಿದರು.

ಪ್ರಸ್ತುತ ಇಲ್ಲಿನ ಅರಣ್ಯಾಧಿಕಾರಿಗಳು ಸಂತಸಗೊಂಡಿದ್ದು, ಇಲ್ಲಿ ಹಲವು ಪ್ರಬೇಧದ ಹುಲ್ಲುಗಳು ಬೆಳೆಯುತ್ತಿವೆ. ಮೇ-ಜೂನ್‌ನಲ್ಲಿ ಹುಲ್ಲು ಕಾಣಿಸಿಕೊಳ್ಳಲು ಪ್ರಾರಂಭಿಸಿದ ನಂತರ, ಸುಮಾರು 500 ಚುಕ್ಕೆ ಜಿಂಕೆಗಳು, 15 ಗುಂಪುಗಳ ಸಾಂಬಾರ್ (ಪ್ರತಿ ಗುಂಪಿಗೆ 2-4, 6-8) ಮತ್ತು 15-16 ಗೌರ್‌ಗಳನ್ನು ಹೆಬ್ಬೆ  ಶ್ರೇಣಿಯಲ್ಲಿ ಕಾಣಿಸಿಕೊಳ್ಳಲಾರಂಭಿಸಿವೆ. ಬೇಟೆಯ ಸಾಂದ್ರತೆಯ (ಸಸ್ಯಹಾರಿ ಪ್ರಭೇದಗಳು) ಹೆಚ್ಚಳದೊಂದಿಗೆ, ಹುಲಿಗಳು ಮತ್ತು ಚಿರತೆಗಳು ಕೂಡ ಇಲ್ಲಿ ಸುಳಿಯಲಾರಂಭಿಸಿವೆ. ಇಲ್ಲಿನ ಸಿಬ್ಬಂದಿಗಳು ನಿರಂತರ ಕರ್ತವ್ಯ ನಿರ್ವಹಣೆ ಮಾಡಿ ಪ್ರಾಣಿಗಳನ್ನು ರಕ್ಷಿಸುತ್ತಿದ್ದಾರೆ. ಅಲ್ಲದೆ ಲಾಟಾಂನಾ ಮತ್ತೆ ಬೆಳೆಯದಂತೆ  ಮುನ್ನೆಚ್ಚರಿಕೆ ವಹಿಸಿದ್ದಾರೆ ಎಂದು ಹೇಳಿದರು. 

ಇನ್ನು ಭದ್ರ ಮೀಸಲು ಅರಣ್ಯ ಪ್ರದೇಶದಲ್ಲಿ ಸುಮಾರು 30 ಹುಲಿಗಳಿದ್ದು, 300ಕ್ಕೂ ಅಧಿಕ ಜಾತಿ ಪಕ್ಷಿಗಳು ಆವಾಸ ಕಂಡುಕೊಂಡಿವೆ. ಇದಲ್ಲದೇ ಏಷ್ಯಾದ ಆನೆಗಳು, ಚಿರತೆಗಳು, ಗೌರ್ಸ್, ತೆಳ್ಳಗಿನ ಲೋರಿಸ್, ಕರಡಿ, ಪ್ಯಾಂಗೊಲಿನ್, ಇತರೆ ಜಾತಿ ಪ್ರಾಣಿಗಳು ಕೂಡ ಜೀವಿಸುತ್ತಿವೆ. 


Stay up to date on all the latest ವಿಶೇಷ news
Poll
rahul-gandhi

ಮಾನಹಾನಿ ಪ್ರಕರಣದಲ್ಲಿ ಜೈಲು ಶಿಕ್ಷೆ; ಲೋಕಸಭಾ ಸದಸ್ಯ ಸ್ಥಾನದಿಂದ ರಾಹುಲ್ ಗಾಂಧಿ ಅನರ್ಹ: ಇದರಿಂದ...


Result
ಕಾಂಗ್ರೆಸ್ ಗೆ ಹಿನ್ನಡೆ
ಕಾಂಗ್ರೆಸ್ ಗೆ ಪ್ರಯೋಜನ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp