ಬೆಂಗಳೂರು: ಮಕ್ಕಳು ಬೋರ್ ಕಳೆಯಲು ಬೋರ್ಡ್ ಗೇಮ್ ಆಡುವುದನ್ನು ನೋಡಿದ್ದೀರಿ. ಬೆಂಗಳೂರಿನ ಬಾಲಕನೊಬ್ಬ ತನ್ನದೇ ಪರಿಕಲ್ಪನೆಯಲ್ಲಿ Treasures of Thiruvananthapuram ಎನ್ನುವ ಬೋರ್ಡ್ ಗೇಮೊಂದನ್ನು ಅಭಿವೃದ್ಧಿಪಡಿಸಿದ್ದಾನೆ.
11 ವರ್ಷದ ಬಾಲಕ ಇಶಾನ್ ಲಾಕ್ ಡೌನ್ ಸಮಯದಲ್ಲಿ ಕುಟುಂಬ ಸದಸ್ಯರೊಡನೆ ಬೋರ್ಡ್ ಗೇಮ್ ಆಡುತ್ತಿದ್ದ. ಇತಿಹಾಸ ಹಿನ್ನೆಲೆಯುಳ್ಲ ಬೋರ್ಡ್ ಗೇಮ್ ಎಂದರೆ ಅವನಿಗೆ ತುಂಬಾ ಇಷ್ಟ. ಹೀಗಾಗಿ ಚಂದ್ರಗುಪ್ತ ಮೌರ್ಯ ಮತ್ತಿತರ ಐತಿಹಾಸಿಕ ಪುರುಷರ ಬೋರ್ಡ್ ಗೇಮ್ ಆಡುತ್ತಿದ್ದ. ಈ ಸಮಯದಲ್ಲಿಯೇ ಇಶಾನ್ ಗೆ ತಾನೂ ಏಕೆ ಇತಿಹಾಸವನ್ನು ಆಧರಿಸಿ ಒಂದು ಹೊಸ ಬೋರ್ಡ್ ಸೃಷ್ಟಿಸಬಾರದು ಎನ್ನುವ ಯೋಚನೆ ಮೊಳೆಯಿತು.
ಅದಕ್ಕಾಗಿ ಆತ ಆರಿಸಿಕೊಂಡಿದ್ದು ತಿರುವನಂತಪುರದ ಪದ್ಮನಾಭ ದೇಗುಲವನ್ನು. ದೇಗುಲದಡಿ ದೊಡ್ಡ ಪ್ರಮಾಣದಲ್ಲಿ ಚಿನ್ನದ ನಿಧಿ ಇದೆ ಎನ್ನುವ ಬಗ್ಗೆ ಈ ಹಿಂದೆ ಸುದ್ದಿಯಾಗಿದ್ದು ಅನೇಕರಿಗೆ ನೆನಪಿರಬಹುದು. ಆದನ್ನೇ ಪ್ರೇರಣೆಯಾಗಿ ಪಡೆದು ನಿಧಿ ಹುಡುಕುವ ಬೋರ್ಡ್ ಗೇಮನ್ನು ಇಶಾನ್ ರೂಪಿಸಿದ್ದಾನೆ. ಅದರ ಹೆಸರು 'ಟ್ರೆಶರ್ಸ್ ಆಫ್ ತಿರುವನಂತಪುರಂ'
ಆಟವನ್ನು ಅಭಿವೃದ್ಧಿಪಡಿಸುವ ಮೊದಲು ಆತ ಸಂಶೋಧನೆ ನಡೆಸಿದ್ದಾನೆ ಎನ್ನುವುದು ವಿಶೇಷ. ಇಶಾನ್ ಬೆಂಗಳೂರಿನ ಎಕ್ಯಾ ಶಾಲೆಯ ವಿದ್ಯಾರ್ಥಿ. ಆನ್ ಲೈನ್ ಆಟಗಳನ್ನು ಆಡುವುದಕ್ಕೆ ಬದಲಾಗಿ ಮಕ್ಕಳು ಬೋರ್ಡ್ ಗೇಮುಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಲಬೇಕು ಎನ್ನುವುದು ಇಶಾನ್ ಅಭಿಪ್ರಾಯ.
ಬಾಗಿಲು ತೆರೆದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲ: ಕೇವಲ 5,000 ಜನರಿಗಷ್ಟೇ ಪ್ರವೇಶಕ್ಕೆ ಅವಕಾಶ
ದೇಗುಲಗಳನ್ನು ಮುಚ್ಚಬೇಕೆಂಬ ಆದೇಶ ಪಾಲನೆಯಲ್ಲಿ ಯಾರಿಗೂ ವಿನಾಯಿತಿ ಇರಬಾರದು: ಹೈಕೋರ್ಟ್
ಜಮ್ಮು: ವೈಷ್ಣೋದೇವಿ ದೇಗುಲ ಕಾಂಪ್ಲೆಕ್ಸ್ ನಲ್ಲಿ ಅಗ್ನಿ ಅವಘಡ, ನಗದು-ದಾಖಲೆ ಭಸ್ಮ
ಧ್ವಂಸ ಮಾಡಲಾಗಿದ್ದ ಹಿಂದೂ ದೇಗುಲದ ಪುನರ್ ನಿರ್ಮಾಣಕ್ಕೆ 3.48 ಕೋಟಿ ರೂ. ಬಿಡುಗಡೆ ಮಾಡಿದ ಪಾಕ್ನ ಕೆಪಿಕೆ ಸರ್ಕಾರ
ಅಯೋಧ್ಯೆಯ ರಾಮ ಲಲ್ಲಾ ದೇಗುಲದಲ್ಲಿ “ರಾಮ್ ಸೇತು” ಚಿತ್ರಕ್ಕೆ ಮುಹೂರ್ತ
Advertisement