ಇದು ಹಳ್ಳಿಕಾರ್ ತಳಿ ಹೋರಿ 'ಕೃಷ್ಣ'ನ ಶಕ್ತಿ: ಮಳವಳ್ಳಿ ತಾಲ್ಲೂಕಿನ ರೈತ ಬೋರೇಗೌಡ ರ ಹೋರಿಯ ಕರಾಮತ್ತು ನೋಡಿ...

ಹೋರಿಗಳನ್ನು ನೋಡಲು, ಹೋರಿಗಳ ಓಟವನ್ನು ಕಾಣಲು ಜನ ಮುಗಿಬೀಳುವುದು ಸಾಮಾನ್ಯ. ಮೈಸೂರು ದಸರಾ ಕೃಷಿ ಮೇಳದ ಎಕ್ಸ್‌ಪೋದಲ್ಲಿ ಹಳ್ಳಿಕಾರ್ ತಳಿಯ ಹೋರಿ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದು, ದೇಶಿ ತಳಿಯ ಹೋರಿಯನ್ನು ಖರೀದಿಸಲು ತಳಿಗಾರರು ಒಂದು ಕೋಟಿಗೂ ಹೆಚ್ಚು ಹಣ ನೀಡಲು ಸಿದ್ಧರಾಗಿದ್ದಾರೆ.
ಇದು ಹಳ್ಳಿಕಾರ್ ತಳಿ ಹೋರಿ 'ಕೃಷ್ಣ'ನ ಶಕ್ತಿ: ಮಳವಳ್ಳಿ ತಾಲ್ಲೂಕಿನ ರೈತ ಬೋರೇಗೌಡ ರ ಹೋರಿಯ ಕರಾಮತ್ತು ನೋಡಿ...

ಮೈಸೂರು: ಹೋರಿಗಳನ್ನು ನೋಡಲು, ಹೋರಿಗಳ ಓಟವನ್ನು ಕಾಣಲು ಜನ ಮುಗಿಬೀಳುವುದು ಸಾಮಾನ್ಯ. ಮೈಸೂರು ದಸರಾ ಕೃಷಿ ಮೇಳದ ಎಕ್ಸ್‌ಪೋದಲ್ಲಿ ಹಳ್ಳಿಕಾರ್ ತಳಿಯ ಹೋರಿ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದು, ದೇಶಿ ತಳಿಯ ಹೋರಿಯನ್ನು ಖರೀದಿಸಲು ತಳಿಗಾರರು ಒಂದು ಕೋಟಿಗೂ ಹೆಚ್ಚು ಹಣ ನೀಡಲು ಸಿದ್ಧರಾಗಿದ್ದಾರೆ.

ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಬಿ.ಜಿ.ಬಂಡೂರು ಕುರಿ ತೋಟದ ಮಾಲೀಕ ಬೋರೇಗೌಡ 4 ವರ್ಷ 7 ತಿಂಗಳ ಪ್ರಾಯದ ಹೋರಿ ಕೃಷ್ಣನ ಮಾಲೀಕ. ಕೃಷ್ಣ ನನ್ನು ಮೊದಲು ಮಂಡ್ಯದ ಕಾಳೇನಹಳ್ಳಿಯ ರವಿ ಪಟೇಲ್ ಎಂಬುವರು ಹೊಂದಿದ್ದರು. ಅವರಿಂದ ದರೋಡೆಕೋರರಾಗಿ ಪರಿವರ್ತನೆಗೊಂಡ ಸಾಮಾಜಿಕ ಕಾರ್ಯಕರ್ತ ಮುತ್ತಪ್ಪ ರೈ `4.5 ಲಕ್ಷಕ್ಕೆ ಖರೀದಿಸಿದರು.

ಕರು ದುರ್ಬಲವಾಗಿತ್ತು, ಆದ್ದರಿಂದ ನಾನು ಅದನ್ನು 2.75 ಲಕ್ಷಕ್ಕೆ ಖರೀದಿಸಿದೆ. ನಾನು ಅದಕ್ಕೆ ಪೌಷ್ಟಿಕ ಆಹಾರವನ್ನು ನೀಡಿದ್ದೇನೆ. ಈಗ ಗೂಳಿ 6.5 ಅಡಿ ಎತ್ತರ, 8 ಅಡಿ ಉದ್ದ ಮತ್ತು 900 ಕೆಜಿ ತೂಕ ಹೊಂದಿದೆ. ಈ ಹಿಂದೆ ನನ್ನ ಜಮೀನಿಗೆ ಬಂದಿದ್ದ ಕೆಲವು ತಳಿಗಾರರು 6 ಲಕ್ಷ ರೂಪಾಯಿ ನೀಡಿ ಖರೀದಿಸಲು ಮುಂದಾಗಿದ್ದರು. ಇತ್ತೀಚೆಗೆ ಮಾಜಿ ಪಶುಸಂಗೋಪನಾ ಸಚಿವ ಕೆ.ಎನ್.ನಾಗೇಗೌಡ ಅವರ ಪುತ್ರ ಅರುಣ್ ಗೌಡ 68 ಲಕ್ಷ ರೂಪಾಯಿ ಹೇಳಿದ್ದರು. ಮಳವಳ್ಳಿಯ ದಾಸನದೊಡ್ಡಿ ಗ್ರಾಮದ ರೈತ ಪಾಪಣ್ಣಗೌಡ 1 ಕೋಟಿ ರೂಪಾಯಿ ನೀಡಲು ಸಿದ್ದನಿದ್ದೇನೆ ಎನ್ನುತ್ತಾರೆ.  ಆದರೆ, ಹೋರಿ ಲಿಮ್ಕಾ ಬುಕ್ ಆಫ್ ರೆಕಾರ್ಡ್‌ಗೆ ಸೇರಬೇಕೆಂದು ನಾನು ಬಯಸುತ್ತೇನೆ, ನಂತರ ನನಗೆ ಉತ್ತಮ ಬೆಲೆ ಸಿಕ್ಕರೆ ಅದನ್ನು ಮಾರಾಟ ಮಾಡಲು ಯೋಚಿಸುತ್ತಿದ್ದೇನೆ ಎನ್ನುತ್ತಾರೆ ಬೋರೇಗೌಡ. 

ಕೃಷ್ಣ ತನ್ನ ಸಂತಾನಾಭಿವೃದ್ಧಿಗೆ ಹೆಸರುವಾಸಿ. ಇದರ ಪ್ರತಿ ವೀರ್ಯದ ಕೋಲಿನ ಬೆಲೆ ಸಾವಿರ ರೂಪಾಯಿ. ಇದನ್ನು ದ್ರವರೂಪದ ಸಾರಜನಕ ಧಾರಕದಲ್ಲಿ ಇರಿಸಲಾಗುತ್ತದೆ. ಹಳ್ಳಿಕಾರ್ ಹೋರಿ ಸೆಮೆನ್ ನ್ನು ತಳಿಗಾಗಿ ಮಾರುವ ನಮ್ಮ ದೇಶದ ಏಕೈಕ ರೈತ ಬೋರೇಗೌಡ. ವೀರ್ಯ ಶೇಖರಣಾ ಕಾರ್ಯವಿಧಾನದ ಬಗ್ಗೆ ಅವರು ಹರಿಯಾಣದ ಯುವರಾಜ್ ಬುಲ್‌ನ ಮಾಲೀಕ ಕರಮ್‌ವೀರ್ ಸಿಂಗ್ ಅವರಿಂದ ಕಲಿತಿದ್ದಾರೆ. 

ಈ ಪ್ರದೇಶದಲ್ಲಿ ಗೋಶಾಲೆಗಳನ್ನು ತೆರೆಯುವ ಮೂಲಕ ತಳಿ ಮತ್ತು ಸಂಕರೀಕರಣದಿಂದ ಅಳಿವಿನ ಅಂಚಿನಲ್ಲಿರುವ ತಳಿಯನ್ನು ರಕ್ಷಿಸುತ್ತಿರುವ ಮೈಸೂರು ಒಡೆಯರನ್ನು ಬೋರೇಗೌಡ ಶ್ಲಾಘಿಸಿದರು. ಹಳ್ಳಿಕಾರ್ ತಳಿಯ ಎತ್ತುಗಳು ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಮತ್ತು ತುಮಕೂರು ಜಿಲ್ಲೆಗಳಲ್ಲಿ ಕಂಡುಬರುತ್ತವೆ ಮತ್ತು ಉಳುಮೆಗೆ ಅಗತ್ಯವಾದ ಶಕ್ತಿಗೆ ಹೆಸರುವಾಸಿಯಾಗಿದೆ. ಆಧುನಿಕ ಉಳುಮೆ ಯಂತ್ರಗಳಾದ ಟ್ರ್ಯಾಕ್ಟರ್, ಟಿಲ್ಲರ್, ರೋಟರಿಯಿಂದಾಗಿ ರೈತರು ಗೂಳಿ ಸಾಕುವುದನ್ನು ನಿಲ್ಲಿಸಿದ್ದಾರೆ ಎಂದರು.

ಸಾವಯವ ಕೃಷಿಗೆ ನೆರವು
ಹಾಲಿನಲ್ಲಿ ಎ2 ಪ್ರೊಟೀನ್ ಇದ್ದು, ಇದು ಕಿಡ್ನಿ ಸಂಬಂಧಿತ ಕಾಯಿಲೆಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಅಧಿಕ ರಕ್ತದೊತ್ತಡ ಮತ್ತು ಮಧುಮೇಹವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. “ಹಳ್ಳಿಕಾರ್ ಜಾನುವಾರುಗಳ ಹಾಲನ್ನು ಸಾವಯವ ಕೃಷಿಗೆ ಬಳಸಲಾಗುತ್ತದೆ. ಸಾವಯವ ಕೃಷಿಗೆ ದನದ ಮೂತ್ರ, ಹಾಲು, ಸಗಣಿ, ಮೊಸರು, ತುಪ್ಪವನ್ನು ಬಳಸಲಾಗುತ್ತದೆ ಎನ್ನುತ್ತಾರೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com