ಶಬರಿಮಲೆಯಲ್ಲಿ ಉದ್ಘೋಷಕರಾಗಿ ಚಿಕ್ಕಮಗಳೂರು ಮೂಲದ ಪಂಚಾಯತ್ ಸದಸ್ಯ ದಿನಕ್ಕೆ 750 ರೂ. ಸಂಪಾದನೆ, ಬಡವರಿಗೆ ಹಣ ಮೀಸಲು!

ಇವರ ಹೆಸರು ಕುಮಾರ್ ಎಂ ಎಂ ಯಾವಾಗಲೂ ಕಾಯಕದಲ್ಲಿ ನಿರತ ವ್ಯಕ್ತಿ. 49 ವರ್ಷದ ಚಿಕ್ಕಮಗಳೂರು ಜಿಲ್ಲೆಯ ಬೈರವಳ್ಳಿ ಗ್ರಾಮ ಪಂಚಾಯತ್ ಸದಸ್ಯರಾಗಿರುವ ಇವರು ಜನಸೇವೆಯಲ್ಲಿ ಸದಾ ಮುಂದು.
ಶಬರಿಮಲೆ
ಶಬರಿಮಲೆ

ಪತ್ತನಂತಿಟ್ಟ: ಇವರ ಹೆಸರು ಕುಮಾರ್ ಎಂ ಎಂ ಯಾವಾಗಲೂ ಕಾಯಕದಲ್ಲಿ ನಿರತ ವ್ಯಕ್ತಿ. 49 ವರ್ಷದ ಚಿಕ್ಕಮಗಳೂರು ಜಿಲ್ಲೆಯ ಬೈರವಳ್ಳಿ ಗ್ರಾಮ ಪಂಚಾಯತ್ ಸದಸ್ಯರಾಗಿರುವ ಇವರು ಜನಸೇವೆಯಲ್ಲಿ ಸದಾ ಮುಂದು. 

ಪ್ರತಿ ವರ್ಷ ಶಬರಿಮಲೆ ಯಾತ್ರೆಯ ಸಮಯದಲ್ಲಿ, ಕುಮಾರ್ ಅವರು ಭಕ್ತನಾಗಿ ಮಾತ್ರವಲ್ಲದೆ ಯಾತ್ರಿಕರಿಗೆ ಮಾರ್ಗಸೂಚಿಗಳು, ನಿಯಮಗಳು ಮತ್ತು ಸೂಚನೆಗಳ ಬಗ್ಗೆ ತಿಳಿಸುವ ಉದ್ಘೋಷಕರಾಗಿ ಶಬರಿಮಲೆಗೆ ಹೋಗಿ ಸೇವೆ ಸಲ್ಲಿಸುತ್ತಿರುತ್ತಾರೆ. 

ನಾನು ಎರಡು ದಶಕಗಳಿಂದ ಇಲ್ಲಿಗೆ ಬಂದು ಉದ್ಘೋಷಕನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ನಾನು ಪಂಪಾದಲ್ಲಿ 19 ವರ್ಷ ಮತ್ತು ನಿಲಕ್ಕಲ್‌ನಲ್ಲಿ ನಾಲ್ಕು ವರ್ಷಗಳ ಕಾಲ ಘೋಷಣೆಗಳನ್ನು ಮಾಡಿದ್ದೇನೆ. ಸನ್ನಿಧಾನಂನಲ್ಲಿ ಕೆಲಸ ಮಾಡುವುದು ಇದೇ ಮೊದಲು. ಇದರಿಂದ ನನ್ನ ಮನಸ್ಸಿಗೆ ಅಪಾರ ಸಂತೋಷ ಸಿಗುತ್ತದೆ. ಇದೆಲ್ಲವೂ ಭಗವಾನ್ ಅಯ್ಯಪ್ಪನ ಆಶೀರ್ವಾದವೇ ಕಾರಣ ಎಂದು ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಭಕ್ತರಿಗೆ ಪ್ರಕಟಣೆ, ಮಾರ್ಗಸೂಚನೆ ನೀಡುವ ಕುಮಾರ್ ಹೇಳುತ್ತಾರೆ. 

ಪಯಣ ಆರಂಭವಾಗಿದ್ದು ಹೇಗೆ? ಕುಮಾರ್ ಮೊದಲು ಮೈಕ್ ಕೈಗೆತ್ತಿಕೊಂಡಾಗ 26 ವರ್ಷ. ಅದು 2000ನೇ ಇಸವಿಯಲ್ಲಿ. ನಾನು ಅತ್ಯಂತ ಬಡ ಕುಟುಂಬದಲ್ಲಿ ಜನಿಸಿದೆ. 1987ರಲ್ಲಿ ನನ್ನ 13ನೇ ವಯಸ್ಸಿನಲ್ಲಿ ನನ್ನ ತಂದೆ ಮುನಿಸ್ವಾಮಿ ಶಬರಿಮಲೆಗೆ ಹೋಗಿದ್ದರು. ನಾನು ಕೂಡ ಅಯ್ಯಪ್ಪ ದೇವರ ದರ್ಶನ ಮಾಡಬೇಕೆಂಬ ಬಲವಾದ ಆಸೆಯನ್ನು ವ್ಯಕ್ತಪಡಿಸಿದ್ದೆ. ಆದರೆ ನಮ್ಮಿಬ್ಬರ ಖರ್ಚು ಭರಿಸಲು ನನ್ನ ತಂದೆ ಅಸಹಾಯಕರಾಗಿದ್ದರು ಎನ್ನುತ್ತಾರೆ. 

1993 ರಲ್ಲಿ ಚಿಕ್ಕಮಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಪಾಲಕ್ಕಾಡ್ ಮೂಲದ ಗೋಪಾಲ್ ಅವರು ಕುಮಾರ್ ಅವರ ಆಸೆಯನ್ನು ತಿಳಿದು ಅವರನ್ನು ಶಬರಿಮಲೆಗೆ ಕರೆದೊಯ್ದರು. ಅಂದು ನಾನು ಅಯ್ಯಪ್ಪ ಸ್ವಾಮಿಯನ್ನು ಮೊದಲ ಬಾರಿಗೆ ನೋಡಿದೆ. ನನ್ನ ಕುಟುಂಬವನ್ನು ಬಡತನದಿಂದ ಮೇಲೆತ್ತಲು ನಾನು ಪ್ರಾರ್ಥಿಸಿದೆ ಎಂದು ಹಣವನ್ನು ಉಳಿಸಲು ಬೈರವಳ್ಳಿಯ ಹೋಟೆಲ್‌ಗಳಲ್ಲಿ ಕೆಲಸ ಮಾಡುತ್ತಿದ್ದ ಕುಮಾರ್ ಹಿಂದಿನ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ. 

ಜೀವನ ಬದಲಿಸಿದ ರೈಲು ಪಯಣ: ನಿಧಾನವಾಗಿ ನಮ್ಮ ಜೀವನವು ಉತ್ತಮವಾದ ತಿರುವು ಪಡೆಯಿತು. 2000ನೇ ಇಸವಿಯಲ್ಲಿ ಪಂಪಾದಿಂದ ಸನ್ನಿಧಾನಂವರೆಗೆ ಸ್ವಚ್ಛತಾ ಕಾರ್ಯ ಕೈಗೊಳ್ಳಲು ನಿರ್ಧರಿಸಿದ್ದೆ. ನಾನು ಕರ್ನಾಟಕದಿಂದ ರೈಲು ಹತ್ತಿದೆ. ಆ ಪ್ರವಾಸವು ಜೀವನದಲ್ಲಿ ಒಂದು ಮಹತ್ವದ ತಿರುವು. ನನ್ನ ಪ್ರಯಾಣದ ಸಮಯದಲ್ಲಿ, ನಾನು ಸನ್ನಿಧಾನದಲ್ಲಿ ಅನೌನ್ಸರ್ ಆಗಿದ್ದ ಮಂಜುನಾಥನ್ ಸ್ವಾಮಿಯನ್ನು ಭೇಟಿಯಾದೆ. ನಾನು ನನ್ನ ಬಾಲ್ಯದ ಅನುಭವಗಳನ್ನು ಮತ್ತು ಶಬರಿಮಲೆಗೆ ನನ್ನ ಮೊದಲ ಆಗಮನದ ನೆನಪುಗಳನ್ನು ಹಂಚಿಕೊಂಡೆ. ಪಂಪಾದಲ್ಲಿರುವ ತಿರುವಾಂಕೂರು ದೇವಸ್ವಂ ಮಂಡಳಿಯ (TDB) ಅಧಿಕಾರಿ ಬಿಜು ಸ್ವಾಮಿ ಅವರನ್ನು ನನಗೆ ಪರಿಚಯಿಸಿದ್ದು ಅವರೇ. ಅವರ ಬೆಂಬಲದಿಂದ ಪಂಪಾದಲ್ಲಿ ಉದ್ಘೋಷಕನಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿತು ಎಂದು ಕುಮಾರ್ ನೆನಪಿಸಿಕೊಂಡರು.

ಅವರು ಜನವರಿ 9 ರಿಂದ ಜನವರಿ 19 ರವರೆಗೆ ಕೆಲಸ ಮಾಡಿದರು. ಮೊದಲ ಮೂರು ದಿನ, ನಾನು ಕಾಣೆಯಾದ ಘಟನೆಗಳ ಬಗ್ಗೆ ಕನ್ನಡದಲ್ಲಿ ಪ್ರಕಟಣೆಗಳನ್ನು ನಡೆಸಿದೆ . ನಂತರ ನಾನು ಗಣಪತಿಯ ಮೋದಕ, ಹನುಮಂತನ ಅವಲಕ್ಕಿ ನೈವೇದ್ಯ ಮತ್ತು ಬುಕ್‌ಸ್ಟಾಲ್‌ನ ಬಗ್ಗೆ ಪ್ರಕಟಿಸಿದೆ. 10 ದಿನಗಳ ನಂತರ, ಟಿಡಿಬಿ ಅಧಿಕಾರಿಗಳು ಮತ್ತೆ ನನಗೆ ಕರೆ ಮಾಡುವುದಿಲ್ಲ ಎಂದು ನಾನು ಭಾವಿಸಿದೆ. ಆದರೂ ಹೋಗುವಾಗ ಮೋದಕ, ಅಪ್ಪಂ, ಅರವಣ ಕೊಟ್ಟು ಮುಂದಿನ ವರ್ಷ ಬರುವಂತೆ ಹೇಳಿದರು. ನನಗೆ ಆಗ ಅತೀವ ಆನಂದವಾಯಿತು ಎನ್ನುತ್ತಾರೆ. 

ಕೊನೆಯ ಉಸಿರು ಇರುವವರೆಗೂ ಶಬರಿಮಲೆಗೆ ಬರುತ್ತೇನೆ ಎಂದು ಕುಮಾರ್ ಹೇಳಿದ್ದಾರೆ. ಮೊದಲ ಆರು ವರ್ಷ ನನಗೆ ಸಂಭಾವನೆ ಸಿಗಲಿಲ್ಲ. ಈಗ, ನಾನು ಪ್ರಕಟಣೆಗಳನ್ನು ಹೇಳಿ ದಿನಕ್ಕೆ 750 ರೂಪಾಯಿ ಗಳಿಸುತ್ತೇನೆ. 2020ರಲ್ಲಿ  ಬೈರವಳ್ಳಿ ಪಂಚಾಯತ್ ಸದಸ್ಯರಾಗಿ ಆಯ್ಕೆಯಾದೆ. ಹಣವಿಲ್ಲದ ಯಾತ್ರಾರ್ಥಿಗಳಿಗೆ ತಮ್ಮ ಸ್ವಂತ ಸ್ಥಳಕ್ಕೆ ಮರಳಲು ಮತ್ತು ಅವರ ಪ್ರದೇಶದ ಶಾಲೆಗಳಿಗೆ ಸಹಾಯ ಮಾಡಲು ಹಣವನ್ನು ನೀಡುತ್ತೇನೆ. ಅವರ ಪತ್ನಿ ಜಯನತಿ ಅವರು 2015 ರಿಂದ 2020 ರವರೆಗೆ ಪಂಚಾಯತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ದಂಪತಿಗೆ ಕಾವ್ಯಶ್ರೀ ಮತ್ತು ದೀಕ್ಷಿತ್‌ಕುಮಾರ್ ಎಂಬ ಇಬ್ಬರು ಮಕ್ಕಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com