ಮಹಾಕುಂಭಕ್ಕೆ ತೆರಳಲು ಹಣದ ಕೊರತೆ: ಹಿತ್ತಲಿನಲ್ಲಿ 40 ಅಡಿ ಬಾವಿ ತೋಡಿ 'ಗಂಗೆ' ಭೂಮಿಗೆ ತಂದ 'ಗೌರಿ'; ಶಿವರಾತ್ರಿಯಂದು ಪುಣ್ಯಸ್ನಾನ

ಮಹಾಕುಂಭಕ್ಕೆ ಹೋಗಲು ಅದೃಷ್ಟವಿರಬೇಕು. ನನಗೆ ಅಷ್ಟು ವೆಚ್ಚವನ್ನು ಭರಿಸಲಾಗುವುದಿಲ್ಲ. ಹೀಗಾಗಿ ನಾನು ಇಲ್ಲಿ ಬಾವಿ ತೋಡಿ ಗಂಗೆಯನ್ನು ತರಲು ನಿರ್ಧರಿಸಿದೆ.
Gowri digs 40-foot well in her backyard
40 ಅಡಿ ಬಾವಿ ತೋಡಿದ ಗೌರಿ
Updated on

ಶಿರಸಿ: ಮಹಾಕುಂಭಮೇಳಕ್ಕಾಗಿ ಪ್ರಯಾಗರಾಜ್‌ಗೆ ಪ್ರವಾಸ ಕೈಗೊಳ್ಳಲು ಸಾಧ್ಯವಾಗದ 57 ವರ್ಷದ ಗೌರಿ ವಿಶಿಷ್ಟವಾದ ಕೆಲಸವನ್ನು ಮಾಡಿದ್ದಾರೆ. ಅವರು ತಮ್ಮ ಹಿತ್ತಲಿನಲ್ಲಿ 40 ಅಡಿ ಆಳದ ಬಾವಿಯನ್ನು ತೋಡಿದ್ದಾರೆ, ಆ ಮೂಲಕ ಗಂಗೆಯನ್ನು ಭೂಮಿಗೆ ತರುತ್ತಿದ್ದಾರೆ. ಅವರು ಇದನ್ನೆಲ್ಲಾ ಸ್ವತಃ ಮಾಡಿದ್ದಾರೆ.

2024 ರ ಮಧ್ಯದಲ್ಲಿ, ಜಿಲ್ಲಾಡಳಿತದ ವಿರೋಧದ ನಡುವೆಯೂ ಅಂಗನವಾಡಿ ಮಕ್ಕಳು ಮತ್ತು ಸಿಬ್ಬಂದಿಯ ಬಾಯಾರಿಕೆಯನ್ನು ನೀಗಿಸಲು ಅವರು ಬಾವಿ ತೋಡಿದ್ದಾರೆ. ಮಹಾಕುಂಭಕ್ಕೆ ಹೋಗಲು ಅದೃಷ್ಟವಿರಬೇಕು. ನನಗೆ ಅಷ್ಟು ವೆಚ್ಚವನ್ನು ಭರಿಸಲಾಗುವುದಿಲ್ಲ (ಗೌರಿ ತನ್ನ ಜೀವನೋಪಾಯಕ್ಕೆ ಸಹಾಯ ಮಾಡುವ ಕೃಷಿ ಭೂಮಿಯ ಒಂದು ಸಣ್ಣ ಭಾಗವನ್ನು ಹೊಂದಿದ್ದಾರೆ). ಹೀಗಾಗಿ ನಾನು ಇಲ್ಲಿ ಬಾವಿ ತೋಡಿ ಗಂಗೆಯನ್ನು ತರಲು ನಿರ್ಧರಿಸಿದೆ ಎಂದು ಅವರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು.

ಅವರು ಈಗ 40 ಅಡಿ ಆಳ ತೋಡಿದ್ದಾರೆ ಮತ್ತು ಬಾವಿಯಲ್ಲಿ ಸಾಕಷ್ಟು ನೀರು ಸಿಕ್ಕಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದ್ದಾರೆ. ಈ ತಿಂಗಳ ಕೊನೆಯಲ್ಲಿ ಮಹಾ ಶಿವರಾತ್ರಿ ದಿನದಂದು ಇದೇ ಬಾವಿ ನೀರಿನಲ್ಲಿ ನಾನು ಸ್ನಾನ ಮಾಡಲು ಯೋಜಿಸುತ್ತಿದ್ದೇನೆ ಎಂದು ಅವರು ಹೇಳಿದರು.

ಗೌರಿ ಡಿಸೆಂಬರ್‌ನಲ್ಲಿ ಮಹಾಕುಂಭಮೇಳದ ಬಗ್ಗೆ ಕೇಳಿದ್ದರು, ಆದರೆ ಪ್ರಯಾಗ್‌ರಾಜ್‌ಗೆ ಪ್ರಯಾಣಿಸಲು ತನ್ನ ಬಳಿ ಸಾಕಷ್ಟು ಹಣವಿಲ್ಲ ಎಂಬುದನ್ನು ಅರಿತಿದ್ದರು. ಆಗ ಅವರು ಬಾವಿಯನ್ನು ಅಗೆಯಲು ನಿರ್ಧರಿಸಿದರು. ಕೂಡಲೇ ಡಿಸೆಂಬರ್ 15 ರಂದು ಬಾವಿ ತೋಡಲು ಆರಂಭಿಸಿದರು.

Gowri digs 40-foot well in her backyard
ಶಿರಸಿಯಲ್ಲಿ ಆಧುನಿಕ ಭಗೀರಥಿ: ಸಂಕಷ್ಟ ನೋಡಲಾಗದೆ ಅಂಗನವಾಡಿ ಮಕ್ಕಳಿಗಾಗಿ ಬಾವಿ ತೋಡುತ್ತಿರುವ ಮಹಿಳೆ!

ಅವರ ಸಂಬಂಧಿಕರು ಮತ್ತು ನೆರೆಹೊರೆಯವರ ಪ್ರಕಾರ, ಅವರು ದಿನಕ್ಕೆ ಸುಮಾರು 6-8 ಗಂಟೆಗಳ ಕಾಲ ಕೆಲಸ ಮಾಡಿದರು, ಮಣ್ಣು ಅಗೆಯುವುದು ಮತ್ತು ಅದನ್ನು ಹೊರಸುರಿಯುವುದು. ಅವರು ತಮ್ಮ ಪ್ರಯತ್ನವನ್ನು ಪ್ರಾರಂಭಿಸಿದ ಎರಡು ತಿಂಗಳ ನಂತರ ಫೆಬ್ರವರಿ 15 ರಂದು ಬಾವಿಯನ್ನು ಪೂರ್ಣಗೊಳಿಸಿದರು.

ಯಾರ ಸಹಾಯವಿಲ್ಲದೆ ಬಾವಿಯನ್ನು ತೋಡುವುದು ಗೌರಿಗೆ ಹೊಸದಲ್ಲ. ಇಲ್ಲಿಯವರೆಗೆ ಅವರು ಸ್ವತಃ ನಾಲ್ಕು ಬಾವಿಗಳನ್ನು ತೋಡಿದ್ದಾರೆ. ಒಂದು ಕೃಷಿಗಾಗಿ ತನ್ನ ಹೊಲದಲ್ಲಿ, ಇನ್ನೊಂದು ತನ್ನ ಹಳ್ಳಿಯ ಜನರ ಬಾಯಾರಿಕೆಯನ್ನು ನೀಗಿಸಲು ಮತ್ತು ಮೂರನೆಯದು 2024 ರ ಮಧ್ಯದಲ್ಲಿ ಸಿರ್ಸಿಯ ಗಣೇಶ ನಗರ ಅಂಗನವಾಡಿ ಶಾಲೆಯಲ್ಲಿ ಬಾವಿ ತೋಡಿದ್ದಾರೆ.

ಅಂಗನವಾಡಿಗಾಗಿ ಬಾವಿಯ ತೋಡುವ ಕೆಲಸಕ್ಕೆ ಜಿಲ್ಲಾಡಳಿತ ತೀವ್ರವಾಗಿ ಆಕ್ಷೇಪಿಸಿತು. ಅಂದಿನ ಜಿಲ್ಲಾಧಿಕಾರಿ ಬಾವಿ ತೋಡುವುದನ್ನು ತಕ್ಷಣವೇ ನಿಲ್ಲಿಸುವಂತೆ ಆದೇಶಿಸಿದರು. ಆದರೆ ಆಗಿನ ಉತ್ತರ ಕನ್ನಡ ಸಂಸದ ಅನಂತ್ ಕುಮಾರ್ ಹೆಗ್ಡೆ ಅವರ ಬೆಂಬಲದ ನಂತರ ಗೌರಿ ಬಾವಿಯನ್ನು ಪೂರ್ಣಗೊಳಿಸಿದರು. ನಂತರ ಅವರು 45 ಅಡಿ ಆಳದ ಬಾವಿಯನ್ನು ತೋಡಿದ್ದರು ಮತ್ತು ಅದು ಇನ್ನೂ ಬಳಕೆಯಲ್ಲಿದೆ. ಹೊಸ ಬಾವಿಯ ವಿಷಯದಲ್ಲಿ, ಅವರು ಮತ್ತೆ ಒಬ್ಬಂಟಿಯಾಗಿ ತೋಡಿದ್ದಾರೆ, ಬಾವಿಯಲ್ಲಿ ನೀರು ಸಿಕ್ಕಿದ್ದಕ್ಕೆ ಗೌರಿ ಸಂತೋಷ ವ್ಯಕ್ತಪಡಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com