Women's day special: ಜೋಳದ ರೊಟ್ಟಿ ಮಾರಾಟದಿಂದ ಬದುಕು ಕಟ್ಟಿಕೊಂಡ ವಿಜಯಪುರ ಜಿಲ್ಲೆಯ ಮಹಿಳೆಯರು!

ಮಹಿಳೆಯರಿಗೆ ಸರ್ಕಾರ ನೀಡಿರುವ ಉಚಿತ ಬಸ್ ಪಾಸ್ ಯೋಜನೆಯೂ ಈ ಪ್ರಯತ್ನಕ್ಕೆ ನೆರವಾಗಿದೆ. ಇದರಿಂದ ಅವರಿಗೆ ತಿಂಗಳಿಗೆ ಸುಮಾರು 6,000 ಸಾವಿರ ರೂಪಾಯಿ ಪ್ರಯಾಣ ವೆಚ್ಚ ಉಳಿಯುತ್ತದೆ ಎನ್ನುತ್ತಾರೆ.
Women from Vijayapura district prepare jowar rotis during a weekly food initiative in Bengaluru
ವಿಜಯಪುರದ ಮಹಿಳೆಯರು ಬೆಂಗಳೂರಿನಲ್ಲಿ ವಾರಾಂತ್ಯ ಆಹಾರ ಕಾರ್ಯಕ್ರಮದಲ್ಲಿ ಜೋಳದ ರೊಟ್ಟಿ ತಯಾರಿ
Updated on

ಇಂದು ಅಂತಾರಾಷ್ಟ್ರೀಯ ಮಹಿಳಾ ದಿನ, ತಮ್ಮ ಕೆಲಸ ಕಾರ್ಯಗಳು, ಬದುಕಿನ ಶೈಲಿ, ಸಾಧನೆಗಳಿಂದ ಸಮಾಜದಲ್ಲಿ ಮಾದರಿಯಾಗಿ ಬದುಕುತ್ತಿರುವ ಅನೇಕ ಮಹಿಳೆಯರು ನಮ್ಮ ಸುತ್ತಮುತ್ತ ಇದ್ದಾರೆ. ಅಂತಹ ಒಬ್ಬ ಮಹಿಳೆ ಕುರಿತ ವರದಿ ಇಲ್ಲಿದೆ:

ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ಸುಮಿತ್ರಾ ಹಲಕವಾಡೆ ಅವರು ಪ್ರತಿ ಭಾನುವಾರ ಬೆಳಗ್ಗೆಯಿಂದ ಸುಮಾರು ಆರು ಗಂಟೆಗಳ ಕಾಲ ಸ್ಟೌವ್ ಮುಂದೆ ನಿಂತು ಜೋಳದ ರೊಟ್ಟಿಗಳನ್ನು ತಯಾರಿಸುತ್ತಾರೆ. ಸುಮಾರು 200 ಜೋಳದ ರೊಟ್ಟಿಗಳ ಜೊತೆಗೆ ಉತ್ತರ ಕರ್ನಾಟಕದ ಪರಂಪರೆಯ ಹಲವಾರು ತಿನಿಸುಗಳನ್ನು ತಯಾರಿಸುತ್ತಾರೆ. ಇವುಗಳ ಮಾರಾಟದಿಂದ ಅವರಿಗೆ ಪ್ರತಿ ವಾರ ಸುಮಾರು 10 ಸಾವಿರ ರೂಪಾಯಿ ಆದಾಯ ದೊರೆಯುತ್ತದೆ.

ಇಂದು ಸುಮಿತ್ರಾ ತಿಂಗಳಿಗೆ ಸುಮಾರು 50 ಸಾವಿರ ರೂಪಾಯಿ ಗಳಿಸುತ್ತಿದ್ದಾರೆ. ಈ ಆದಾಯದ ಪ್ರಮುಖ ಭಾಗ ಉತ್ತರ ಕರ್ನಾಟಕದ ಮುಖ್ಯ ಆಹಾರವಾದ ಜೋಳದ ರೊಟ್ಟಿ ತಯಾರಿಸುವುದರಿಂದ ಅವರಿಗೆ ಬರುತ್ತಿದೆ.

Women from Vijayapura district prepare jowar rotis during a weekly food initiative in Bengaluru
ಅಂತಾರಾಷ್ಟ್ರೀಯ ಮಹಿಳಾ ದಿನ ಮಹಿಳೆಯರು ಎದುರಿಸುತ್ತಿರುವ ಸವಾಲುಗಳ ಮೇಲೂ ಬೆಳಕು ಚೆಲ್ಲಲಿ: ಸಿಎಂ ಸಿದ್ದರಾಮಯ್ಯ

ಸುಮಿತ್ರಾ ಅವರ ಜೊತೆ ಈ ರೀತಿ ಸುಮಾರು 40 ಮಹಿಳೆಯರು ದುಡಿಯುತ್ತಾರೆ. ಈ ಮಹಿಳೆಯರು ಒಡಲು ಧ್ವನಿ ಎಂಬ ಸ್ವಯಂಸೇವಾ ಸಂಸ್ಥೆ ಆರಂಭಿಸಿದ ಯೋಜನೆಯ ಭಾಗವಾಗಿದ್ದಾರೆ. ಇವರಲ್ಲಿ ಬಹುತೇಕರು ಹಿಂದೆ ಕೃಷಿ ಕೂಲಿ ಕಾರ್ಮಿಕರಾಗಿದ್ದರು.

ಪ್ರತಿ ಶನಿವಾರ ರಾತ್ರಿ ಈ ಮಹಿಳೆಯರು ತಮ್ಮ ಊರುಗಳಿಂದ ಬಸ್ ಹತ್ತಿ ಬೆಂಗಳೂರಿಗೆ ಬರುತ್ತಾರೆ. ಮರುದಿನ ಭಾನುವಾರ ಬೆಳಗ್ಗೆ ಅವರು ಗೊಟ್ಟಿಗೆರೆ ತಲುಪಿ ಜೋಳದ ರೊಟ್ಟಿ ಹಾಗೂ ಉತ್ತರ ಕರ್ನಾಟಕದ ಸಾಂಪ್ರದಾಯಿಕ ತಿನಿಸುಗಳನ್ನು ತಯಾರಿಸಲು ಆರಂಭಿಸುತ್ತಾರೆ.

ಈ ಯೋಜನೆಯ ಸ್ಥಾಪಕಿ ಭುವನೇಶ್ವರಿ ಕಂಬಳೆ ಅವರು ವಿಜಯಪುರ ಜಿಲ್ಲೆಯ ನಿವಾಸಿ. ಅವರು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ಮಾಡಿದ್ದಾರೆ. ತಮ್ಮ ಸಂಶೋಧನೆಯ ಭಾಗವಾಗಿ ಅವರು ಗ್ರಾಮೀಣ ಮಹಿಳೆಯರ ಜೀವನವನ್ನು ಹತ್ತಿರದಿಂದ ತಿಳಿದುಕೊಂಡರು.

ಹಲವಾರು ಮಹಿಳೆಯರು ಅತ್ಯಂತ ಕಷ್ಟದ ಜೀವನ ನಡೆಸುತ್ತಿದ್ದರು. ಅವರು ಹೊಲಗಳಲ್ಲಿ ದೀರ್ಘ ಕಾಲ ದುಡಿದರೂ ಅಲ್ಪ ವೇತನವೇ ಸಿಗುತ್ತಿತ್ತು. ಕೆಲವರು ಉತ್ತಮ ವೇತನಕ್ಕಾಗಿ ಬೇರೆ ರಾಜ್ಯಗಳಿಗೆ ವಲಸೆ ಹೋಗುತ್ತಿದ್ದರು. ಮಹಿಳೆಯರ ಈ ಪರಿಸ್ಥಿತಿ ಮಕ್ಕಳ ಶಿಕ್ಷಣಕ್ಕೂ ಪರಿಣಾಮ ಬೀರುತ್ತಿತ್ತು. ಪೋಷಕರು ಕೆಲಸಕ್ಕಾಗಿ ಹೊರ ರಾಜ್ಯಗಳಿಗೆ ಹೋದಾಗ ಮಕ್ಕಳ ಶಿಕ್ಷಣ ಹಿನ್ನಡೆಯಾಗುತ್ತಿತ್ತು ಮತ್ತು ಹಲವರು ಶಾಲೆ ಬಿಟ್ಟುಕೊಳ್ಳುತ್ತಿದ್ದರು.

ಇವನ್ನೆಲ್ಲಾ ಕಂಡ ಭುವನೇಶ್ವರಿ ಕಂಬಳೆ ಮಹಿಳೆಯರನ್ನು ಸ್ವಸಹಾಯ ಗುಂಪುಗಳಾಗಿ ಸಂಘಟಿಸಿ ಆದಾಯದ ಮಾರ್ಗಗಳನ್ನು ಹುಡುಕಲು ಪ್ರೇರೇಪಿಸಿದರು. ಮೊದಲಿಗೆ ಅವರು ನಗರಗಳಲ್ಲಿ ಬೇಡಿಕೆ ಇರುವ ಜೈವಿಕ ಕೃಷಿ ಬೆಳೆಗಳನ್ನು ಬೆಳೆಸಲು ಪ್ರಾರಂಭಿಸಿದರು. ನಂತರ ಮನೆಮದ್ದು ಆಹಾರ ಪದಾರ್ಥಗಳನ್ನು ತಯಾರಿಸುವ ಯೋಚನೆ ಅವರಲ್ಲಿ ಮೂಡಿತು.

Women from Vijayapura district prepare jowar rotis during a weekly food initiative in Bengaluru
ಸೆಪ್ಟೆಂಬರ್ 13 ರಂದು ಮಹಿಳಾ ನೌಕರರ ದಿನಾಚರಣೆ: ರಾಜ್ಯ ಸರ್ಕಾರ ಘೋಷಣೆ

ಹೊಸ ಐಡಿಯಾ, ಆಲೋಚನೆ

ಒಂದು ಸಭೆಯಲ್ಲಿ ಅವರಿಗೆ ಹೊಸ ಕಲ್ಪನೆ ಮೂಡಿತು. ಒಬ್ಬ ಮಹಿಳೆ ಬೆಳೆದ ಕಡಲೆಕಾಯಿಗಳನ್ನು ನೇರವಾಗಿ ಮಾರುವ ಬದಲು ಅದರಿಂದ ಹೋಳಿಗೆ ತಯಾರಿಸೋಣ ಎಂಬ ಸಲಹೆ ನೀಡಿದರು. ಗೋಧಿ ಹಿಟ್ಟು, ಬೆಲ್ಲ ಮತ್ತು ಕಡಲೆಕಾಯಿ ಹೂರಣದಿಂದ ಮಾಡಿದ ಹೋಳಿಗೆಗಳನ್ನು ಬೆಂಗಳೂರು ನಗರದಲ್ಲಿ ಮಾರಾಟ ಮಾಡಿದಾಗ ಬೇಡಿಕೆ ಬಂತು. ನಂತರ ಅವರು ಜೋಳದ ರೊಟ್ಟಿಗಳನ್ನೂ ತಯಾರಿಸಲು ಆರಂಭಿಸಿದರು.

ಆರಂಭದಲ್ಲಿ ಕೇವಲ ಐದು ಮಹಿಳೆಯರೊಂದಿಗೆ ಪ್ರಯತ್ನ ಆರಂಭಿಸಲಾಯಿತು. ಮೊದಲ ದಿನವೇ ಜನರು ಸಾಲಿನಲ್ಲಿ ನಿಂತು ಆಹಾರವನ್ನು ರುಚಿಸಿದರು. ಸುಮಾರು 200 ರೊಟ್ಟಿಗಳನ್ನು ತಯಾರಿಸಲಾಗಿತ್ತು, ಮಧ್ಯಾಹ್ನ ಹೊತ್ತಿಗೆ ಅವೆಲ್ಲವೂ ಮಾರಾಟವಾಗಿಬಿಟ್ಟಿತ್ತು.

ಇದರಿಂದ ಇನ್ನಷ್ಟು ಮಹಿಳೆಯರು ಈ ಯೋಜನೆಗೆ ಸೇರಿದರು. ಈಗ ಇಂಡಿ ಪಟ್ಟಣದ ಸುಮಾರು 40 ಮಹಿಳೆಯರು ಪ್ರತೀ ವಾರಾಂತ್ಯ ಬೆಂಗಳೂರಿಗೆ ಬಂದು ಸಾಂಪ್ರದಾಯಿಕ ಉತ್ತರ ಕರ್ನಾಟಕದ ಊಟ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ.

ಕೆಲವರು ರೊಟ್ಟಿ ತಯಾರಿಸುತ್ತಾರೆ, ಇತರರು ತರಕಾರಿ ಪಲ್ಯ ಮತ್ತು ಚಟ್ನಿ ಮಾಡುತ್ತಾರೆ. ಬಳಸುವ ತರಕಾರಿಗಳ ಬಹುತೇಕವು ಅವರದೇ ಹೊಲಗಳಿಂದ ಬರುತ್ತವೆ.

ಬೆಂಗಳೂರು ನಗರದಲ್ಲಿನ ಅನೇಕ ಅಪಾರ್ಟ್‌ಮೆಂಟ್ ಸಮುಚ್ಚಯಗಳು ಇವರನ್ನು ತಮ್ಮ ವಸತಿ ಪ್ರದೇಶಗಳಲ್ಲಿ ನಿಯಮಿತವಾಗಿ ಆಹಾರ ತಯಾರಿಸಲು ಆಹ್ವಾನಿಸಿವೆ. ಆದರೆ ಈಗಿನ ವೇಳೆಗೆ ಸಿಬ್ಬಂದಿ ಮತ್ತು ಸಮಯದ ಕೊರತೆಯಿಂದ ಈ ಆಫರ್‌ಗಳನ್ನು ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ.

ಭವಿಷ್ಯದಲ್ಲಿ ಒಡಲು ಧ್ವನಿ ಇನ್ನಷ್ಟು ಸಾಂಪ್ರದಾಯಿಕ ತಿನಿಸುಗಳನ್ನು ಮೆನುಗೆ ಸೇರಿಸಿ, ಇನ್ನಷ್ಟು ಗ್ರಾಮೀಣ ಮಹಿಳೆಯರನ್ನು ಈ ಯೋಜನೆಯಲ್ಲಿ ಸೇರಿಸುವ ಯೋಜನೆ ಹೊಂದಿದೆ.

ನೆರವಿಗೆ ಬಂದ ಉಚಿತ ಬಸ್ ಯೋಜನೆ

ಈ ಯೋಜನೆಯಿಂದ ಮಹಿಳೆಯರ ಆತ್ಮವಿಶ್ವಾಸ ಮತ್ತು ಸ್ವಾವಲಂಬನೆ ಹೆಚ್ಚಾಗಿದೆ. ಮೊದಲು ಜಿಲ್ಲೆಯ ಹೊರಗೆ ಹೋಗದಿದ್ದ ಮಹಿಳೆಯರು ಈಗ ರಾತ್ರಿ ಪ್ರಯಾಣಿಸಿ ಬೆಂಗಳೂರಿಗೆ ಬಂದು ಸ್ವತಃ ವ್ಯವಹಾರ ನಿರ್ವಹಿಸುತ್ತಿದ್ದಾರೆ.

ಮಹಿಳೆಯರಿಗೆ ಸರ್ಕಾರ ನೀಡಿರುವ ಉಚಿತ ಬಸ್ ಪಾಸ್ ಯೋಜನೆಯೂ ಈ ಪ್ರಯತ್ನಕ್ಕೆ ನೆರವಾಗಿದೆ. ಇದರಿಂದ ಅವರಿಗೆ ತಿಂಗಳಿಗೆ ಸುಮಾರು 6,000 ರೂಪಾಯಿ ಪ್ರಯಾಣ ವೆಚ್ಚ ಉಳಿಯುತ್ತದೆ ಎನ್ನುತ್ತಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com