ಕ್ರಿಕೆಟ್ ಚೆಂಡಿಗೆ ಬಾಲಕ ಬಲಿ

ಮನೆಯ ಬಳಿ ಕ್ರಿಕೆಟ್ ಆಡುತ್ತಿದ್ದ 6 ವರ್ಷದ ಬಾಲಕ ಎದೆಗೆ ಟೆನಿಸ್ ಬಾಲ್ ಬಡಿದು ಸಾವನ್ನಪ್ಪಿದ್ದಾನೆ. ಟಿ. ವಂಶಿಕೃಷ್ಣ ಮೃತ ದುರ್ದೈವಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಹೈದರಾಬಾದ್: ಮನೆಯ ಬಳಿ ಕ್ರಿಕೆಟ್ ಆಡುತ್ತಿದ್ದ 6 ವರ್ಷದ ಬಾಲಕ ಎದೆಗೆ ಟೆನಿಸ್ ಬಾಲ್ ಬಡಿದು ಸಾವನ್ನಪ್ಪಿದ್ದಾನೆ. ಟಿ. ವಂಶಿಕೃಷ್ಣ ಮೃತ ದುರ್ದೈವಿ. ವಾನಸ್ಥಾಲಿಪುರಂನಲ್ಲಿನ ಸಹಾರಾ ಎಸ್ಟೇಟ್‍ನಲ್ಲಿ ತನ್ನ ನಿವಾಸದ ಅಕ್ಕಪಕ್ಕದ ಮನೆಗಳ ಹುಡುಗರೊಂದಿಗೆ ಆತ ಗುರುವಾರ ಬೆಳಗ್ಗೆ ಕ್ರಿಕೆಟ್ ಆಡುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ಫೀಲ್ಡಿಂಗ್ ಮಾಡುತ್ತಿದ್ದಾಗ ಬ್ಯಾಟ್ಸ್‍ಮನ್ ಬಿರುಸಿನ ಹೊಡೆತಕ್ಕೆ ಸಿಕ್ಕ ಚೆಂಡು ನೇರವಾಗಿ ಬಂದು ವಂಶಿಕೃಷ್ಣನ ಎದೆಗೆ ಅಪ್ಪಳಿಸಿದೆ. ರಭಸವಾದ ಹೊಡೆತವಾಗಿದ್ದರಿಂದ ಆತ ಸ್ಥಳದಲ್ಲೇ ಕುಸಿದುಬಿದ್ದಿದ್ದಾನೆ. ತಕ್ಷಣವೇ ಆತನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿ ಚಿಕಿತ್ಸೆ ನೀಡುತ್ತಿರುವಾಗಲೇ ಕೃಷ್ಣವಂಶಿ ಅಸುನೀಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯಿಂದ ದುಃಖಿತರಾದ ಕೃಷ್ಣವಂಶಿಯ ತಂದೆ-ತಾಯಿ, ಜೋರಾಗಿ  ಬ್ಯಾಟಿಂಗ್ ನಡೆಸಿದ್ದ ಬಾಲಕನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಆತನ ನಿರ್ಲಕ್ಷ್ಯದಿಂದಲೇ ತಮ್ಮ ಮಗ ಸಾವನ್ನಪ್ಪಿದ್ದಾನೆಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com