ಆನಂದ್‍ಗೆ ಅನೀಶ್ ಗಿರಿ ಸವಾಲು

ಗೆಲುವಿನ ಹಾದಿಗೆ ಮರಳಲು ಪರದಾಡುತ್ತಿರುವ ಮಾಜಿ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್, ಸಿಂಕ್ವೆಫೀಲ್ಡ್ ಕಪ್...
ವಿಶ್ವನಾಥ್ ಆನಂದ್
ವಿಶ್ವನಾಥ್ ಆನಂದ್

ಸೆಂಟ್ ಲೂಯಿಸ್: ಗೆಲುವಿನ ಹಾದಿಗೆ ಮರಳಲು ಪರದಾಡುತ್ತಿರುವ ಮಾಜಿ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್, ಸಿಂಕ್ವೆಫೀಲ್ಡ್ ಕಪ್ ಟೂರ್ನಿಯ ಆರನೇ ಸುತ್ತಿನಲ್ಲಿ ಹಾಲೆಂಡ್‍ನ ಅನೀಶ್ ಗೀರಿ ವಿರುದ್ಧ ಸೆಣಸಲಿದ್ದಾರೆ. 

ಆರಂಭಿಕ ಐದು ಸುತ್ತಿನ ಪಂದ್ಯಗಳ ಪೈಕಿ 2ರಲ್ಲಿ ಸೋಲು ಹಾಗೂ 3ರಲ್ಲಿ ಡ್ರಾ ಸಾಧಿಸುವ ಮೂಲಕ ಟೂರ್ನಿಯಲ್ಲಿ 1.5 ಅಂಕಗಳನ್ನು ಸಂಪಾದಿಸಿರುವ ಆನಂದ್, ಭಾನುವಾರ ನಡೆಯಲಿರುವ ಆರನೇ ಸುತ್ತಿನಲ್ಲಿ ಗೆಲುವಿನ ಲಯಕ್ಕೆ ಮರಳಲು ಎದುರು ನೋಡುತ್ತಿದ್ದಾರೆ.

10 ಆಟಗಾರರ ಈ ಟೂರ್ನಿಯಲ್ಲಿ ಆನಂದ್ ಜಂಟಿ 9ನೇ ಸ್ಥಾನದಲ್ಲಿದ್ದಾರೆ. ಉಳಿದಿರುವ ನಾಲ್ಕು ಸುತ್ತಿನಲ್ಲಿ ಬೃಹತ್ ಗೆಲುವು ದಾಖಲಿಸಿದರಷ್ಟೇ ಆನಂದ್ ಚೇತರಿಕೆ ಕಾಣಲು ಸಾಧ್ಯವಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com