ಅರುಣ್ ಜೇಟ್ಲಿಗೆ ಸೆಹ್ವಾಗ್, ಗಂಭೀರ್ ಬೆಂಬಲ

ದೆಹಲಿ ಕ್ರಿಕೆಟ್ ಅಸೋಸಿಯೇಷನ್‌ನಲ್ಲಿನ ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಅರುಣ್ ಜೇಟ್ಲಿ ಅವರಿಗೆ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಮತ್ತು...
ವಿರೇಂದ್ರ ಸೆಹ್ವಾಗ್ ಮತ್ತು ಗೌತಂ ಗಂಭೀರ್
ವಿರೇಂದ್ರ ಸೆಹ್ವಾಗ್ ಮತ್ತು ಗೌತಂ ಗಂಭೀರ್
ದೆಹಲಿ: ದೆಹಲಿ ಕ್ರಿಕೆಟ್ ಅಸೋಸಿಯೇಷನ್‌ನಲ್ಲಿನ ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಅರುಣ್ ಜೇಟ್ಲಿ ಅವರಿಗೆ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಮತ್ತು ಗೌತಂ ಗಂಭೀರ್ ಬೆಂಬಲ ಸೂಚಿಸಿದ್ದಾರೆ. ಟ್ವೀಟ್ ಮೂಲಕ ಈ ಆಟಗಾರರು ಜೇಟ್ಲಿ ಪರ ಬೆಂಬಲ ಸೂಚಿಸಿದ್ದಾರೆ .  
ಡಿಡಿಸಿಎಯಲ್ಲಿನ ಅವ್ಯವಸ್ಥೆಗೆ ಜೇಟ್ಲಿ ಅವರನ್ನು ಹೊಣೆಯಾಗಿಸುವುದು ಸರಿಯಲ್ಲ. ದೆಹಲಿ ಕ್ರಿಕೆಟ್‌ನ ಅಭಿವೃದ್ಧಿ ಮತ್ತು ಉತ್ತಮ ಕ್ರೀಡಾಂಗಣ ಕಲ್ಪಿಸಿಕೊಡುವುದರಲ್ಲಿ ಜೇಟ್ಲಿ ಪ್ರಧಾನ ಪಾತ್ರ ವಹಿಸಿದ್ದರು ಎಂದು ಗಂಭೀರ್ ಹೇಳಿದ್ದಾರೆ. 
ಜೇಟ್ಲಿಯವರು ಕ್ರಿಕೆಟಿಗರ ಪರವಾಗಿ ನಿಂತ ಅಧಿಕಾರಿಯಾಗಿದ್ದರು. ಸಾಮರ್ಥ್ಯ, ಪ್ರತಿಭೆಯುಳ್ಳ  ಕ್ರಿಕೆಟಿಗರನ್ನು ತಂಡಕ್ಕೆ ಆಯ್ಕೆ ಮಾಡಿ ಅವರಿಗೆ ಬೆಂಬಲ ನೀಡಿದವರು ಜೇಟ್ಲಿ ಎಂದು ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.
ಅದೇ ವೇಳೆ ತನ್ನ ವೃತ್ತಿ ಜೀವನ ಮುಂದುವರಿಸುವಲ್ಲಿ ಜೇಟ್ಲಿ ಪ್ರಧಾನ ಪಾತ್ರ ವಹಿಸಿದ್ದರು ಎಂದು ಇಶಾಂತ್ ಶರ್ಮಾ ಟ್ವೀಟಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com