ನಾಕೌಟ್‍ಗೆ ರಾಬಿನ್ ಅಲಭ್ಯ

ಮಂಡಿ ನೋವಿನಿಂದ ಬಳಲುತ್ತಿರುವ ಭಾರತ ಫುಟ್ಬಾಲ್ ತಂಡದ ಪ್ರಮುಖ ಸ್ಟ್ರೈಕರ್ ರಾಬಿನ್ ಸಿಂಗ್ ಅವರು ಸ್ಯಾಫ್...
ರಾಬಿನ್ ಸಿಂಗ್
ರಾಬಿನ್ ಸಿಂಗ್
ತಿರುವನಂತಪುರ: ಮಂಡಿ ನೋವಿನಿಂದ ಬಳಲುತ್ತಿರುವ ಭಾರತ ಫುಟ್ಬಾಲ್ ತಂಡದ ಪ್ರಮುಖ ಸ್ಟ್ರೈಕರ್ ರಾಬಿನ್ ಸಿಂಗ್ ಅವರು ಸ್ಯಾಫ್  ಫುಟ್ಬಾಲ್ ಟೂರ್ನಿಯ ಇನ್ನುಳಿದ ಪಂದ್ಯಗಳಿಂದ ಹೊರಗುಳಿದಿದ್ದಾರೆ. 
ಶ್ರೀಲಂಕಾ ವಿರುದ್ಧದ ಆರಂಭಿಕ ಪಂದ್ಯದಲ್ಲಿ ರಾಬಿನ್ ಸಿಂಗ್ ಆಕರ್ಷಕ ಎರಡು ಗೋಲು ದಾಖಲಿಸುವ ಮೂಲಕ ಗಮನ ಸೆಳೆದಿದ್ದರು. ಅದೇ ಪಂದ್ಯದಲ್ಲಿ ಮಂಡಿ ನೋವಿನ ಸಮಸ್ಯೆಗೆ ಸಿಲುಕಿದ್ದರು. ಎಂಆರ್‍ಐಐ ಸ್ಕ್ಯಾನಿಂಗ್ ನಲ್ಲಿ ರಾಬಿನ್ ಅವರು ತಗಲಿರುವ ಗಾಯದ ತೀವ್ರತೆ ದೊಡ್ಡದಾಗಿದೆ. 
``ನಾವು ನಿರೀಕ್ಷಿಸಿದ್ದಕ್ಕಿಂತ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ಗಾಯವಾಗಿದೆ. ಹಾಗಾಗಿ ವೈದ್ಯರು 10 ದಿನಗಳ ವಿಶ್ರಾಂತಿಗೆ ಸಲಹೆ ನೀಡಿದ್ದಾರೆ. ಹಾಗಾಗಿ ಅವರು ನಾಕೌಟ್ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ'' ಎಂದು ಭಾರತ ತಂಡದ ಕೋಚ್ ಸ್ಟಾಫನ್ ಕಾನ್ಸ್‍ಟಾಂಟೀನ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com