ನಾನೂ ತಾರತಮ್ಯ ಎದುರಿಸಿದ್ದೆ :ಕಿರ್ಮಾನಿ

ಭಾರತ ಕ್ರಿಕೆಟ್ ತಂಡದ ಮಾಜಿ ವಿಕೆಟ್‍ ಕೀಪರ್ ಸೈಯದ್ ಕಿರ್ಮಾನಿ ತಮ್ಮ ಆಟದ ದಿನಗಳಲ್ಲಿ ತಂಡದ ಸಹ ಆಟಗಾರರಿಂದ ತೀವ್ರತರದ ತಾರತಮ್ಯಕ್ಕೆ ಒಳಗಾಗಿದ್ದಾಗಿ ತಿಳಿಸಿದ್ದಾರೆ.
ಸೈಯದ್ ಕಿರ್ಮಾನಿ
ಸೈಯದ್ ಕಿರ್ಮಾನಿ

ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಮಾಜಿ ವಿಕೆಟ್‍ ಕೀಪರ್ ಸೈಯದ್ ಕಿರ್ಮಾನಿ ತಮ್ಮ ಆಟದ ದಿನಗಳಲ್ಲಿ ತಂಡದ ಸಹ ಆಟಗಾರರಿಂದ ತೀವ್ರತರದ ತಾರತಮ್ಯಕ್ಕೆ ಒಳಗಾಗಿದ್ದಾಗಿ ತಿಳಿಸಿದ್ದಾರೆ. ಸದ್ಯದಲ್ಲೇ ಬಿಡುಗಡೆಯಾಗಲಿರುವ ತಮ್ಮ ಆತ್ಮಚರಿತ್ರೆಯ ಕೃತಿಯು ಈ ಸಂಗತಿಯನ್ನು ಒಳಗೊಂಡಿದೆ ಎಂದು ತಿಳಿಸಿದ್ದಾರೆ.

``1986 ಮತ್ತು 1993ರವರೆಗೆ ದೇಶೀಯ ಕ್ರಿಕೆಟ್‍ನಲ್ಲಿ ತಾನು ಉತ್ತುಂಗದಲ್ಲಿದ್ದೆ. ನನ್ನ ಜತೆಗೆ ಆಡಿದವರೇ ಮುಂದೆ ಆಯ್ಕೆಸಮಿತಿಯಲ್ಲಿದ್ದರು. ಕೆಲವೊಮ್ಮೆ ನಾನು ಕೆಲವರ ಅಹಮ್ಮಿಗೆ ಬಲಿಪಶುವಾಗಿದ್ದೇನೆ. ವಿವಾದಗಳಿಂದಾಗಲೀ ಇಲ್ಲವೇ ಫಿಟ್ನೆಸ್ ಸಮಸ್ಯೆಯನ್ನಾಗಲೀ ಎದುರಿಸದ ನನ್ನನ್ನು ಆಯ್ಕೆಗಾರರು ಪರಿಗಣಿಸಲಿಲ್ಲ. ಹೀಗೆ ನಾನು ತಾರತಮ್ಯಕ್ಕೆ ಒಳಗಾಗಿದ್ದೆ'' ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com