

ಕೊಚ್ಚಿ: ಐಪಿಎಲ್ ಪಂದ್ಯ ಬೆಟ್ಟಿಂಗ್ ಹಗರಣದಲ್ಲಿ ಭಾಗಿಯಾಗಿದ್ದು ಕ್ರಿಕೆಟ್ನಿಂದ ನಿಷೇಧಕ್ಕೊಳಗಾಗಿರುವ ಫಾಸ್ಟ್ ಬೌಲರ್ ಶ್ರೀಶಾಂತ್ ಮೇಲೆ ತಿಹಾರ್ ಜೈಲಿನಲ್ಲಿ ಹತ್ಯೆಗೆ ಯತ್ನ ನಡೆದಿದೆ ಎಂದು ಶ್ರೀಶಾಂತ್ರ ಭಾವ ಮಧು ಬಾಲಕೃಷ್ಣನ್ ದೂರಿದ್ದಾರೆ.
ಶ್ರೀಶಾಂತ್ ತಿಹಾರ್ ಜೈಲಿನಲ್ಲಿದ್ದಾಗ ಒಬ್ಬ ಗೂಂಡಾ ಮಾರಕಾಸ್ತ್ರ ಬಳಸಿ ಮೇಲೆ
ಹಲ್ಲೆ ನಡೆಸಿ ಹತ್ಯೆಗೆ ಯತ್ನಿಸಿದ್ದು, ಅದೃಷ್ಟವಶಾತ್ ಶ್ರೀಶಾಂತ್ ಪಾರಾಗಿದ್ದಾನೆ ಎಂದು ಹಿನ್ನೆಲೆ ಗಾಯಕನಾಗಿರುವ ಮಧು ಬಾಲಕೃಷ್ಣನ್ ಕೇರಳದ ಸುದ್ದಿ ಮಾಧ್ಯಮವೊಂದರಲ್ಲಿ ಹೇಳಿದ್ದಾರೆ.
ಜೈಲಾಧಿಕಾರಿಗಳಿಗೆ ಈ ವಿಷಯ ತಿಳಿಸಿದ್ದು, ಕೂಡಲೇ ಶ್ರೀಶಾಂತ್ನ್ನು ಬೇರೆ ಸೆಲ್ಗೆ ವರ್ಗಾಯಿಸಲಾಗಿತ್ತು. ಆದರೆ ಹಲ್ಲೆಗೆ ಯತ್ನಿಸಿದವನ ವಿರುದ್ಧ ಯಾವ ಕ್ರಮ ಕೈಗೊಂಡಿದ್ದಾರೆ ಎಂಬುದರ ಬಗ್ಗೆ ನಮಗೆ ಮಾಹಿತಿಯಿಲ್ಲ.
ಅದೇ ವೇಳೆ ಈ ಘಟನೆಯ ಹಿಂದೆ ಏನೇನು ಕೈವಾಡಗಳಿವೆಯೋ? ಎಂಬುದರ ಬಗ್ಗೆಯೂ ತನಗೇನೂ ಗೊತ್ತಿಲ್ಲ ಎಂದು ಮಧು ಹೇಳಿದ್ದಾರೆ.