ದೇವರಿಗೆ ಅವಮಾನ ಧೋನಿಗೆ ಸಮನ್ಸ್

ಹಿಂದೂ ದೇವರಿಗೆ ಅಪಮಾನ ಮಾಡಿದ ಪ್ರಕರಣ ಸಂಬಂಧ ಭಾರತ ಕ್ರಿಕೆಟ್ ತಂಡದ ನಾಯಕ ಎಂ.ಎಸ್ ಧೋನಿ...
ಎಂ.ಎಸ್ ಧೋನಿ
ಎಂ.ಎಸ್ ಧೋನಿ
Updated on

ಬೆಂಗಳೂರು: ಹಿಂದೂ ದೇವರಿಗೆ ಅಪಮಾನ ಮಾಡಿದ ಪ್ರಕರಣ ಸಂಬಂಧ ಭಾರತ ಕ್ರಿಕೆಟ್ ತಂಡದ ನಾಯಕ ಎಂ.ಎಸ್ ಧೋನಿ ಹಾಗೂ ಇತರ ನಾಲ್ವರಿಗೆ 9ನೇ ಎಸಿಎಂಎಂ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದ್ದು, ಮೇ 8ರಂದು ಖುದ್ದು ಹಾಜರಾಗುವಂತೆ ಆದೇಶಿಸಿದೆ.

ಪ್ರತಿಷ್ಠಿತ ವಾರಪತ್ರಿಕೆಯೊಂದು ಧೋನಿ ಅವರನ್ನು ವಿಷ್ಣುವಿನಂತೆ ಚಿತ್ರಿಸಿತ್ತು. ಎಂಟು ಕೈಗಳಲ್ಲಿ ವಿವಿಧ ವಸ್ತುಗಳಿದ್ದು, ಒಂದು ಕೈಯಲ್ಲಿ ಶೂ ಇತ್ತು. ಈ ಮೂಲಕ ಧೋನಿ ಹಾಗೂ ವಾರಪತ್ರಿಕೆ ಸಂಪಾದಕರು ಸೇರಿ ಐವರು ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ವಕೀಲ ಧರ್ಮಪಾಲ್ ಎಂಬುವರು 2009ರಲ್ಲಿ ನ್ಯಾಯಾಲಯಕ್ಕೆ ಖಾಸಗಿ ದೂರು ದಾಖಲಿಸಿದ್ದರು. ಶನಿವಾರ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, ಧೋನಿ ಸೇರಿದಂತೆ ಐಳರಿಗೆ ಮೇ 8ರಂದು ಖುದ್ದು ಹಾಜರಾಗುವಂತೆ ಸಮನ್ಸ್ ನೀಡಿದೆ ಎಂದು ವಕೀಲ ಧರ್ಮಪಾಲ್ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com