ನಮ್ಮ ಬ್ಯಾಟ್ಸ್‌ಮೆನ್‌ಗಳು ಪಲಾಯನವಾದಿಗಳು

ಟೀಂ ಇಂಡಿಯಾದ ಬ್ಯಾಟ್ಸ್ ಮೆನ್‌ಗಳು 'ಪಲಾಯನವಾದಿಗಳು' ಎಂದು ಭಾರತದ ಖ್ಯಾತ ಆಟಗಾರ ಸುನೀಲ್ ಗವಾಸ್ಕರ್ ...
ಸುನೀಲ್ ಗವಾಸ್ಕರ್
ಸುನೀಲ್ ಗವಾಸ್ಕರ್

ಸಿಡ್ನಿ: ಟೀಂ ಇಂಡಿಯಾದ ಬ್ಯಾಟ್ಸ್ ಮೆನ್‌ಗಳು 'ಪಲಾಯನವಾದಿಗಳು' ಎಂದು ಭಾರತದ ಖ್ಯಾತ ಆಟಗಾರ ಸುನೀಲ್ ಗವಾಸ್ಕರ್ ಹೇಳಿದ್ದಾರೆ. ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ಭಾರತದ ನಡುವೆ ನಡೆದ ತ್ರಿಕೋನ ಸರಣಿಯಲ್ಲಿ ಒಂದೇ ಒಂದು ಪಂದ್ಯ ಗೆಲ್ಲಲು ಸಾಧ್ಯವಾಗದೇ ಇರುವ ಮಹೇಂದ್ರ ಸಿಂಗ್ ಧೋನಿ ತಂಡದ ವಿರುದ್ಧ ಗವಾಸ್ಕರ್ ಈ ರೀತಿ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

ಇಂಗ್ಲೆಂಡ್ ವಿರುದ್ಧ ಪರಾಭವಗೊಂಡ ಟೀಂ ಇಂಡಿಯಾವನ್ನು ಟೀಕಿಸಿದ ಗವಾಸ್ಕರ್ ರ್ಯಾಶ್ ಶಾಟ್‌ಗಳನ್ನು ಎದುರಿಸಿ ಬ್ಯಾಟ್ಸ್‌ಮೆನ್‌ಗಳು ಔಟಾಗುತಿದ್ದು, ಇದು ದುರದೃಷ್ಟಕರ ಎಂದಿದ್ದಾರೆ.

ಹೆಚ್ಚಿನ ಬ್ಯಾಟ್ಸ್ ಮೆನ್‌ಗಳು ಬ್ಯಾಟಿಂಗ್ ಮಾಡಲು ಹೋಗಿ, ನನ್ನ ವಿಕೆಟ್ ಕೂಡಾ ತೆಗೆದುಕೊಳ್ಳಿ ಅನ್ನೋ ರೀತಿಯಲ್ಲಿ ಔಟಾಗಿ ಬರುತ್ತಾರೆ. ಅಲ್ಲಿ ಹೋಗಿ ವಿಕೆಟ್ ಒಪ್ಪಿಸುವುದಲ್ಲ, ಹೋರಾಡಬೇಕು ಎಂದು ಗವಾಸ್ಕರ್ ಹೇಳಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.

ಮುಂದಿನ ತಿಂಗಳು ವಿಶ್ವಕಪ್ ಪಂದ್ಯವನ್ನಾಡಲಿರುವ ಟೀಂ ಇಂಡಿಯಾ ಈ ರೀತಿ ಪರಾಭವಗೊಳ್ಳುತ್ತಿರುವುದು ಕ್ರಿಕೆಟಿಗರಲ್ಲಿ ಮಾತ್ರ ಅಲ್ಲ ಕ್ರಿಕೆಟ್ ಪ್ರೇಮಿಗಳಲ್ಲೂ ಆತಂಕ ಸೃಷ್ಟಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com