ಎನ್‍ಬಿಎನತ್ತ ಪೂರ್ಣ ಗಮನ: ಸತ್ನಾಮ್ ಸಿಂಗ್

ಸದ್ಯದ ಪರಿಸ್ಥಿತಿಯಲ್ಲಿ ಎನ್‍ಬಿಎನತ್ತ ಸಂಪೂರ್ಣ ಗಮನ ಹರಿಸಿದ್ದು, ಮುಂದಿನ ಎರಡು ವರ್ಷಗಳ ಕಾಲ ಭಾರತ ತಂಡವನ್ನು ಪ್ರತಿನಿಧಿಸಲು ಸಾಧ್ಯವಿಲ್ಲ...
ಸತ್ನಾಮ್ ಸಿಂಗ್
ಸತ್ನಾಮ್ ಸಿಂಗ್

ನವದೆಹಲಿ: ಸದ್ಯದ ಪರಿಸ್ಥಿತಿಯಲ್ಲಿ ಎನ್‍ಬಿಎನತ್ತ ಸಂಪೂರ್ಣ ಗಮನ ಹರಿಸಿದ್ದು, ಮುಂದಿನ ಎರಡು ವರ್ಷಗಳ ಕಾಲ ಭಾರತ ತಂಡವನ್ನು ಪ್ರತಿನಿಧಿಸಲು ಸಾಧ್ಯವಿಲ್ಲ ಎಂದು ಭಾರತದ ಬಾಸ್ಕೆಟ್‍ಬಾಲ್ ತಾರೆ ಸತ್ನಾಮ್ ಸಿಂಗ್ ಸ್ಪಷ್ಟ ಪಡಿಸಿದ್ದಾರೆ.
 
ಭಾರತ ತಂಡ ಸೆಪ್ಟೆಂಬರ್ 3ರಂದು ಚೀನಾದ ವುಹಾನ್‍ನಲ್ಲಿ ನಡೆಯಲಿರುವ ಎಫ್ ಐಬಿ ಎ ಏಷ್ಯನ್ ಚಾಂಪಿಯನ್‍ಶಿಪ್ ಟೂರ್ನಿಗೆ ಅರ್ಹತೆ ಪಡೆದುಕೊಂಡಿದೆ. ಮುಂದಿನ ಎರಡು ವರ್ಷಗಳ ಕಾಲ ಭಾರತ ತಂಡದ ಪರ ಪ್ರತಿನಿಧಿಸಲು ಸಾಧ್ಯವಿಲ್ಲ. ಕೇವಲ ಎನ್‍ಬಿಎನತ್ತ ಮಾತ್ರ ಗಮನಹರಿಸುತ್ತಿದ್ದೇನೆ. ಮುಂದಿನ ಎರಡು ವರ್ಷಗಳ ನಂತರ ನಾನು ಉತ್ತಮ ಪರಿಸ್ಥಿತಿ ತಲುಪಿದ ನಂತರ ಭಾರತ ತಂಡದ ಪರ ಮತ್ತೆ ಆಡುವ ಬಗ್ಗೆ  ತೀರ್ಮಾನ ಕೈಗೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com