ಬಾಂಗ್ಲಾ ಪತ್ರಿಕೆಯೊಂದರಲ್ಲಿ ಭಾರತೀಯ ಕ್ರಿಕೆಟಿಗರ ಅರ್ಧ ತಲೆ ಬೋಳಿಸಿದ ಜಾಹೀರಾತು!

ಬಾಂಗ್ಲಾದೇಶ ವಿರುದ್ಧ ಟೀಂ ಇಂಡಿಯಾ ಸೋತಿರಬಹುದು. ಆದರೆ ಇದನ್ನೇ ದೊಡ್ಡ ಸಾಧನೆ ಎಂದು ಬೀಗುತ್ತಿರುವ ಬಾಂಗ್ಲಾದೇಶ ಇಡೀ ಪ್ರಪಂಚವನ್ನೇ ಗೆದ್ದಂತೆ ಆಡುತ್ತಿದೆ.
ಟೀಂ ಇಂಡಿಯಾ ಆಟಗಾರರ ಅರ್ಧ ತಲೆ ಬೋಳಿಸಿರುವ ಚಿತ್ರ
ಟೀಂ ಇಂಡಿಯಾ ಆಟಗಾರರ ಅರ್ಧ ತಲೆ ಬೋಳಿಸಿರುವ ಚಿತ್ರ
Updated on

ನವದೆಹಲಿ: ಬಾಂಗ್ಲಾದೇಶ ವಿರುದ್ಧ ಟೀಂ ಇಂಡಿಯಾ ಸೋತಿರಬಹುದು. ಆದರೆ ಇದನ್ನೇ ದೊಡ್ಡ ಸಾಧನೆ ಎಂದು ಬೀಗುತ್ತಿರುವ ಬಾಂಗ್ಲಾದೇಶ ಇಡೀ ಪ್ರಪಂಚವನ್ನೇ ಗೆದ್ದಂತೆ ಆಡುತ್ತಿದೆ.

ಎರಡನೇ ಪಂದ್ಯ ಸೋತಿದ್ದೇ ತಡ ಅಂದು ಮೈದಾನದಲ್ಲೇ ಮೌಕ ಮೌಕ ಹಾಡನ್ನು ಹಾಡುವ ಮೂಲಕ ಭಾರತೀಯ ತಂಡವನ್ನು ಬಾಂಗ್ಲಾ ಅಭಿಮಾನಿಗಳು ಅವಮಾನಿಸಿದ್ದರು. ಇದು ಸಾಲದೆಂಬಂತೆ ಕ್ರೀಡಾ ಸ್ಫೂರ್ತಿ ಮರೆತಿರುವ ಬಾಂಗ್ಲಾದೇಶ ದಿನ ಪತ್ರಿಕೆಯೊಂದು ಭಾರತದ ಆಟಗಾರರನ್ನು ಅವಮಾನಿಸಿದ್ದು, ಭಾರತೀಯ ಕ್ರಿಕೆಟ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.

3 ಪಂದ್ಯಗಳ ಮೂಲಕ 13 ವಿಕೆಟ್ ಗಳಿಸಿ ಬಾಂಗ್ಲಾದೇಶ ಗೆಲುವಿಗೆ ಕಾರಣನಾಗಿದ್ದ ಯುವ ಆಟಗಾರ ಮುಸ್ತಾಫಿಜುರ್ ರೆಹಮಾನ್​ಭಾರತೀಯ ಆಟಗಾರರಾದ ಅಜಿಂಕ್ಯಾ ರಹಾನೆ, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ, ಮಹೇಂದ್ರ ಸಿಂಗ್ ಧೋನಿ, ಶಿಖರ್ ಧವನ್ ಹಾಗೂ ಆರ್. ಅಶ್ವಿನ್ ಹಿಂದೆ ನಿಂತು ಕೈಯಲ್ಲಿ ಚಾಕುವೊಂದನ್ನು ಹಿಡಿದು ಅರ್ಧ ತಲೆ ಬೋಳಿಸಿರುವಂತಾ ಜಾಹಿರಾತು ನೀಡಿರುವುದನ್ನು ಐಬಿಎನ್ ಪತ್ರಿಕೆ ವರದಿ ಮಾಡಿದೆ.

ಬಾಂಗ್ಲಾದೇಶದ ಪತ್ರಿಕೆಯೊಂದು ಭಾರತೀಯ ಆಟಗಾರರ ಅರ್ಧ ಕೇಶ ಮುಂಡನದ ಫೋಟೋ ಹಾಕುವ ಮೂಲಕ ಅವಮಾನಿಸಿದೆ.

ಬಾಂಗ್ಲಾದೇಶ ವಿರುದ್ಧ ನಡೆದ ಮೂರು ಏಕದಿನ ಪಂದ್ಯದಲ್ಲಿ ಭಾರತ ಎರಡು ಪಂದ್ಯಗಳನ್ನು ಸೋತಿತ್ತು. ಇದರಿಂದಾಗಿ ಸರಣಿ ಬಾಂಗ್ಲಾದೇಶ ಕೈವಶವಾಯಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com