ಬೆಂಗಳೂರು: ಶೇಷ ಭಾರತ ತಂಡದ ವಿರುದ್ಧ ತವರಿನಲ್ಲೇ ಆಡಲಾಗುವ ಇರಾನಿ ಟ್ರೋಫಿ ಪಂದ್ಯಾವಳಿಗಾಗಿ ಕರ್ನಾಟಕ ತಂಡ ಪ್ರಕಟಗೊಂಡಿದೆ. ರಣಜಿ ಟ್ರೋಫಿ ಚಾಂಪಿಯನ್ ತಂಡದ ನಾಯಕ ವಿನಯ್ ಕುಮಾರ್ ಅವರೇ ತಂಡವನ್ನು ಮುನ್ನಡೆಸಲಿದ್ದಾರೆ. ರಣಜಿ ಟ್ರೋಫಿ ಫೈನಲ್ ಪಂದ್ಯದ ವೇಳೆ ಗಾಯಗೊಂಡಿದ್ದ ಕೆ.ಎಲ್.ರಾಹುಲ್ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಇರಾನಿ ಟ್ರೋಫಿ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಾರ್ಚ್17ರಿಂದ 21ರ ವರೆಗೆ ನಡೆಯಲಿದೆ.
ಕರ್ನಾಟಕ ತಂಡ: ವಿನಯ್ ಕುಮಾ ರ್ (ನಾಯಕ), ರಾಬಿನ್ ಉತ್ತಪ್ಪ, ರವಿಕುಮಾರ್ ಸಮರ್ಥ್, ಮನೀಷ್ ಪಾಂಡೆ, ಕರುಣ್ ನಾ ಯರ್, ಶ್ರೇಯಸ್ ಗೋಪಾಲ್, ಶಿಶಿರ್ ಭವಾನೆ, ಅಭಿಷೇಕ್ ರೆಡ್ಡಿ, ಉದಿತ್ ಪಟೇಲ್, ಅಭಿಮನ್ಯು ಮಿಥುನ್, ಶ್ರೀನಾಥ್ಅರವಿಂದ್, ಎಚ್.ಎಸ್. ಶರತ್, ಸುಚಿತ್ ಜೆ., ಅವಿನಾಶ್ ಕೆ.ಸಿ., ಮಾಯಾಂ ಕ್ ಅಗರ್ವಾಲ್, ಸಿ.ಎಂ. ಗೌತಮ್
Advertisement