ನವದೆಹಲಿ: ಭಾರತದ ಯುವ ಬ್ಯಾಡ್ಮಿಂಟನ್ ಆಟಗಾರ ಎಚ್.ಎಸ್ ಪ್ರಣಯ್, ಇಂಡಿಯ್ ಓಪನ್ ಸೂಪರ್ ಸೀರೀಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ದೊಡ್ಡ ಗೆಲವು ದಾಖಲಿಸಿದ್ದಾರೆ. ಇನ್ನು ಭಾರತದ ಹಿರಿಯ ಬ್ಯಾಡ್ಮಿಂಟನ್ ಆಟಗಾರ ಪಿ.ಕಶ್ಯಪ್ ಸೋಲನುಭವಿಸುವ ಮೂಲಕ ಟೂರ್ನಿಯಿಂದ ಹೊರ ಬಿದ್ದಿದ್ದಾರೆ.
ಸಿರಿ ಫೋರ್ಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 17ನೇ ರ್ಯಾಂಕಿಂಗ್ನ ಪ್ರಣಯ್, ಪ್ರಶಸ್ತಿ ಗೆಲ್ಲುವ ಫೇವರಿಟ್ ಆಟಗಾರ ಎಂದೇ ಬಿಂಬಿತವಾಗಿರುವ 2ನೇ ರ್ಯಾಂಕಿಂಗ್ನ ಜಾನ್ ಒ ಜೊರ್ಗೆನ್ಸನ್ ಅವರನ್ನು ಮಣಿಸುವ ಮೂಲಕ ಅಚ್ಚರಿಯ ಫಲಿತಾಂಶ ನೀಡಿದ್ದಾರೆ. ಈ ಮೂಲಕ ಪ್ರಣಯ್ ಅಂತಿಮ ಎಂಟರ ಘಟ್ಟಕ್ಕೆ ಪ್ರವೇಶಿಸಿದ್ದಾರೆ. ಆರಂಭದಲ್ಲಿ ಮುಗ್ಗರಿಸಿದರೂ ನಂತರ ಹೋರಾಟಕಾರಿ ಪ್ರದರ್ಶನ ನೀಡಿದ ಪ್ರಣಯ್ 18-21, 21-14, 21-14 ಗೇಮ್ ಗಳ ಅಂತರದಲ್ಲಿ ಗೆಲವು ದಾಖಲಿಸಿದರು.
ಇನ್ನು ಕಶ್ಯಪ್, ಚೀನಾದ ಕ್ಯೂ ಸಾಂಗ್ ವಿರುದ್ಧ 17-21, 21-11 ಗೇಮ್ ಗಳ ಅಂತರದಲ್ಲಿ ಸೋಲನುಭವಿಸಿದರು. ಇನ್ನು ಸೈನಾ ನೆಹ್ವಾಲ್ ತಮ್ಮ ಎದುರಾಳಿ ರಾಷ್ಟ್ರೀಯ ಚಾಂಪಿಯನ್ ರುತ್ವಿಕಾ ಶಿವಾನಿ ವಿರುದ್ಧ 21-16, 21-17 ಗೇಮ್ ಗಳ ಅಂತರದಲ್ಲಿ ಗೆದ್ದರು. ಕೆ.ಶ್ರೀಕಾಂತ್ ಎದುರಾಳಿ ಜಪಾನ್ನ ಕೆಂಟೊ ಮೊಮೊಟ ವಿರುದ್ಧ 21-12, 15-21, 21-15 ಗೇಮ್ ಗಳ ಅಂತರದಲ್ಲಿ ಗೆದ್ದರು.
Advertisement