ಶ್ರೀನಿವಾಸನ್ ಐಸಿಸಿ ಮುಖ್ಯಸ್ಥ ಸ್ಥಾನಕ್ಕೆ ಕುತ್ತು

ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯ ಮುಖ್ಯಸ್ಥ ಹುದ್ದೆಗೆ ಬಿಸಿಸಿಐ ಮುಖ್ಯಸ್ಥ ಶಶಾಂಕ್ ಮನೋಹರ್ ಆಯ್ಕೆಯಾಗುವ ಸಂಭವವಿದ್ದು, ಇದರಿಂದಾಗಿ ಎನ್. ಶ್ರೀನಿವಾಸನ್ ಅವಧಿಗೂ ಮುನ್ನವೇ...
ಶ್ರೀನಿವಾಸನ್
ಶ್ರೀನಿವಾಸನ್

ಮುಂಬೈ:ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯ ಮುಖ್ಯಸ್ಥ ಹುದ್ದೆಗೆ ಬಿಸಿಸಿಐ ಮುಖ್ಯಸ್ಥ ಶಶಾಂಕ್ ಮನೋಹರ್ ಆಯ್ಕೆಯಾಗುವ ಸಂಭವವಿದ್ದು, ಇದರಿಂದಾಗಿ ಎನ್. ಶ್ರೀನಿವಾಸನ್ ಅವಧಿಗೂ ಮುನ್ನವೇ ಈ ಸ್ಥಾನವನ್ನೂ ಬಿಟ್ಟುಕೊಡಬೇಕಾಗಿ ಬಂದಿದೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

ಐಸಿಸಿ ಮುಖ್ಯಸ್ಥ ಸ್ಥಾನಕ್ಕೆ ಶ್ರೀನಿವಾಸನ್ ಬದಲಿಗೆ ಶಶಾಂಕ್ ಮನೋಹರ್ ಅವರನ್ನು ಪ್ರತಿಷ್ಠಾಪಿಸುವ  ಸಂಬಂಧ ಮುಂದಿನ ಸೋಮವಾರ ಇಲ್ಲಿನ ಪ್ರಧಾನ ಕಚೇರಿಯಲ್ಲಿ  ನಡೆಯಲಿರುವ ಬಿಸಿಸಿಐ ವಾರ್ಷಿಕ ಮಹಾಸಭೆಯಲ್ಲಿ ಪ್ರಮುಖ ನಿರ್ಣಯ ಹೊರಹೊಮ್ಮು ಸಾಧ್ಯತೆಯಿಗದೆ.

ಕಳೆದ ವರ್ಷ ಜುಲೈ ತಿಂಗಳಿನಲ್ಲಿ ಐಸಿಸಿ ತನ್ನ ನೀತಿ ನಿಯಾಮಾವಳಿಯಲ್ಲಿ ಹೊಸ ಬದಲಾವಣೆ ತಂದಿತ್ತಲ್ಲದೇ, ಆಡಳಿತಾಂಗದ ಸಂಪೂರ್ಣ ಸ್ವರೂಪವನ್ನು ಬದಲಾಯಿಸಿತ್ತು. ಇದರೊಂದಿಗೆ ಶ್ರೀನಿವಾಸನ್ ಅವರನ್ನು ಐಸಿಸಿಯ ಮೊದಲ ಮುಖ್ಯಸ್ಥರನ್ನಾಗಿ ನೇಮಿಸಲಾಗಿತ್ತು. ಆದರೆ ಇತ್ತೀಚಿನ ಬಿಸಿಸಿಐ ನಡೆಯೂ ಶ್ರೀನಿವಾಸನ್ ಅವರ ಎರಡು ವರ್ಷಗಳ ಅವಧಿಯನ್ನು ಮೊಟಕುಗೊಳಿಸಲಿದೆ.

ಕ್ರಿಕ್ ಇನ್ಫೋ ವರದಿಯಂತೆ ಶ್ರೀನಿವಾಸನ್ ಈಗಲೂ ಐಸಿಸಿ ಮುಖ್ಯಸ್ಥರಾಗಿ ಮುಂದುವರಿಯುವುದು ಸರಿಯಾದ ಕ್ರಮವಲ್ಲ. ಶಶಾಂಕ್ ಮನೋಹರ್ ಬಿಸಿಸಿಐ ಮುಖ್ಯಸ್ಖರಾಗಿದ್ದೂ ಶ್ರೀನಿವಾಸನ್ ಭಾರತವನ್ನೂ ಐಸಿಸಿಯಲ್ಲಿ ಪ್ರತಿನಿಧಿಸುವುದು ಸಲ್ಲ ಎಂದು ಮಂಡಳಿಯ ಬಹುಪಾಲು ಸದಸ್ಯರ ನಿಲುವಾಗಿದೆ ಎನ್ನಲಾಗಿದೆ.

ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಜಾಲವೂ ಶ್ರೀನಿವಾಸನ್ ಗೆ ಉರುಳಾಗಿ ಪರಿಣಮಿಸಿತ್ತಲ್ಲದೇ, ಅಲ್ಲಿಂದಾಚೆಗೆ ಶ್ರೀನಿವಾಸನ್ ಹಲವಾರು ವಿಧದಲ್ಲಿ ಹಿನ್ನಡೆ ಅನುಭವಿಸಿದ್ದಾರೆ. ಸರ್ವೋಚ್ಚ ನ್ಯಾಯಾಲಯದಿಂದ ಛೀಮಾರಿ ಹಾಕಿಸಿಕೊಂಡರಲ್ಲದೇ. ಸ್ವಹಿತಾಸಕ್ತಿ ಸಂಘರ್ಷದ ಆರೋಪಕ್ಕೂ ಸಿಲುಕಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com