ಐಸಿಸಿ ಮುಖ್ಯಸ್ಥರ ಹುದ್ದೆಯಲ್ಲಿರುವ, ಎನ್. ಶ್ರೀನಿವಾಸನ್ರನ್ನು ಆ ಸ್ಥಾನದಲ್ಲಿ ಮುಂದುವರಿಸುವ ಬಗ್ಗೆಯೂ ಚರ್ಚೆ ನಡೆಯಲಿದ್ದು, ಸಾಕಷ್ಟು ಕುತೂಹಲ ಸೃಷ್ಟಿಸಿದೆ. ಶ್ರೀನಿಯವರನ್ನು ಆ ಸ್ಥಾನದಿಂದ ತೆರವುಗೊಳಿಸಲು ನಿರ್ಧರಿಸಿದರೆ, ಆ ಸ್ಥಾನಕ್ಕೆ ಶಶಾಂಕ್ ಮನೋಹರ್ ನಾಮಾಂಕಿತಗೊಳ್ಳುವ ಸಾಧ್ಯತೆಗಳಿವೆ. ಸಭೆಯಲ್ಲಿ, ನೂತನ ಐಪಿಎಲ್ ಆಡಳಿತ ಮಂಡಳಿ, ಉಪ ಸಮಿತಿಗಳನ್ನು ಪುನರಾಚಿಸಿ, ಮುಂದಿನ ಐಪಿಎಲ್ ನಲ್ಲಿ ರಾಜಸ್ಥಾನ ರಾಯಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಬದಲಿಗೆ ಯಾವ ತಂಡಗಳನ್ನು ಆಡಿಸಬೇಕೆಂಬುದ ಬಗ್ಗೆ ಚರ್ಚೆಗಳಾಗಲಿವೆ.