ಅಜಯ್ ಠಾಕೂರ್, ರಾಕೇಶ್ ಕುಮಾರ್, ದೀಪಕ್ ಹುಡ್ಡಾ, ಜಸ್ಮೀರ್ ಸಿಂಗ್, ಸುರ್ಜಿತ್ ನರ್ವಾಲ್, ಧರ್ಮರಾಜ್ ಚೆರಲನಾಥನ್, ವಾಸಿಂ ಸಜ್ಜದ್, ರಾಜಗುರು ಸುಬ್ರಮಣಿಯನ್ ಈ ಬಾರಿ ಬೇರೆ ತಂಡದಲ್ಲಿ ಆಡಲಿದ್ದಾರೆ ಎಂದು ಪ್ರೋ ಕಬಡ್ಡಿ ಲೀಗ್ ಆಯೋಜಕರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದೇ ವೇಳೆ ಯು ಮುಂಬಾ ತಂಡದ ನಾಯಕ ಅನೂಪ್ ಕುಮಾರ್, ದಬಾಂಗ್ ಡೆಲ್ಲಿಯ ಕಾಶಿಲಿಂಗ್ ಅಡಕೆ ಸೇರಿದಂತೆ ರವೀಂದರ್ ಪಹಲ್, ರಾಹುಲ್ ಚೌಧರಿ, ಸುಖೇಶ್ ಹೆಗಡೆ, ಜಾನ್ ಕುನ್ ಲೀ, ಸಂದೀಪ್ ನರ್ವಾಲ್ ಅದೇ ತಂಡಗಳಲ್ಲಿ ಮುಂದುವರಿಯಲಿದ್ದಾರೆ.