ತಿರುವನಂತಪುರ: ಭಾರತದ ಖ್ಯಾತ ಅಥ್ಲೀಟ್ಗಳಲ್ಲಿ ಒಬ್ಬರೆನಿಸಿರುವ ಅಂಜು ಬಾಬಿ ಜಾರ್ಜ್ ಅವರನ್ನು ಕೇರಳ ರಾಜ್ಯ ತನ್ನ ಕ್ರೀಡಾ ಸಮಿತಿಯ ಮುಖ್ಯಸ್ಥರನ್ನಾಗಿ ನೇಮಿಸಿದೆ.
ಈ ಆಯ್ಕೆಯನ್ನು ಸಾಧನೆಯ ಮಾನದಂಡದ ಆಧಾರದ ಮೇಲೆ ನಡೆಸಲಾಗಿದೆ ಎಂದು ಕ್ರೀಡಾ ಸಚಿವರಾದ ರಾಧಾಕೃಷ್ಣನ್ ತಿಳಿಸಿದ್ದಾರೆ. ಅಂಜು ಅವರು ಅಂತಾರಾಷ್ಟ್ರೀಯ ಮಟ್ಟದ ಖ್ಯಾತ ಅಥ್ಲೀಟ್ ಆಗಿದ್ದು, ನಮ್ಮ ಕ್ರೀಡಾ ಮಂಡಳಿಯನ್ನು ಸಮರ್ಥವಾಗಿ ಮುನ್ನಡೆಸಲು ಅರ್ಹ ವ್ಯಕ್ತಿ ಎಂಬುದು ನಮ್ಮ ನಿರ್ಧಾರ.
ಹೀಗಾಗಿಯೇ ಅವರನ್ನು ನೇಮಕ ಮಾಡಲಾಯಿತು'' ಎಂದು ಹೇಳಿದ್ದಾರೆ. ಅಂದಹಾಗೆ ಅಂಜು 2003ರ ಪ್ಯಾರಿಸ್ನಲ್ಲಿನ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನ ಲಾಂಗ್ಜಂಪ್ನಲ್ಲಿ 6.70 ಮೀ. ಜಿಗಿದು ಪದಕ ಗೆದ್ದ ಭಾರತದ ಏಕೈಕ ಅಥ್ಲೀಟ್ ಎಂಬ ಖ್ಯಾತಿ ಪಡೆದಿದ್ದಾರೆ.