ರಣಜಿ ಟ್ರೋಫಿ ; 3 ಅಂಕಕ್ಕೆ ತೃಪ್ತಿ ಪಟ್ಟುಕೊಂಡ ಕರ್ನಾಟಕ

ಪಶ್ಚಿಮ ಬಂಗಾಳ ನಾಯಕ ಮನೋಜ್ ತಿವಾರಿ ಶತಕ ಮತ್ತು ನವೀದ್ ಅಹಮದ್ ಅರ್ಧ ಶತಕದ ನೆರವಿನಿಂದ ಬಂಗಾಳ ತಂಡ ಕರ್ನಾಟಕ ವಿರುದ್ಧ ಡ್ರಾ ಸಾಧಿಸಲು ...
ಕರ್ನಾಟಕ ರಣಜಿ ತಂಡದ ನಾಯಕ ವಿನಯ್ ಕುಮಾರ್
ಕರ್ನಾಟಕ ರಣಜಿ ತಂಡದ ನಾಯಕ ವಿನಯ್ ಕುಮಾರ್
Updated on

ಬೆಂಗಳೂರು: ಪಶ್ಚಿಮ ಬಂಗಾಳ ನಾಯಕ ಮನೋಜ್ ತಿವಾರಿ ಶತಕ ಮತ್ತು ನವೀದ್ ಅಹಮದ್ ಅರ್ಧ ಶತಕದ ನೆರವಿನಿಂದ ಬಂಗಾಳ ತಂಡ ಕರ್ನಾಟಕ ವಿರುದ್ಧ ಡ್ರಾ ಸಾಧಿಸಲು ಸಫಲವಾಗಿದ್ದು, ಮೊದಲ ಇನ್ನಿಂಗ್ಸ್ ಮುನ್ನಡೆ ಆಧಾರದ ಮೇಲೆ ಕರ್ನಾಟಕಕ್ಕೆ 3 ಅಂಕ ಲಭಿಸಿದೆ.

ಕಡೆಗೂ ಕರ್ನಾಟಕ ಬೌಲರ್​ಗಳ ಕೈ ಹಿಡಿಯಲಿಲ್ಲ. ಮೊದಲ ಪಂದ್ಯದಲ್ಲಿ ಇನಿಂಗ್ಸ್ ಹಿನ್ನಡೆ ಅನುಭವಿಸಿ 1 ಅಂಕಕ್ಕೆ ತೃಪ್ತಿಪಟ್ಟುಕೊಂಡಿದ್ದ ಹಾಲಿ ಚಾಂಪಿಯನ್ ಕರ್ನಾಟಕ, ಪ್ರಸಕ್ತ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ತವರಿನಲ್ಲಿ ಗೆಲುವಿನ ಅಭಿಯಾನ ಆರಂಭಿಸುವ ಕನಸು ಈಡೇರಲಿಲ್ಲ. ಇನಿಂಗ್ಸ್ ಗೆಲುವಿನ ಲೆಕ್ಕಾಚಾರದಲ್ಲಿದ್ದ ವಿನಯ ಕುಮಾರ್ ನೇತೃತ್ವದ ಪಡೆ, ಬಂಗಾಳ ನಾಯಕ ಮನೋಜ್ ತಿವಾರಿ (103*ರನ್, 197 ಎಸೆತ, 13 ಬೌಂಡರಿ) ಹಾಗೂ ನವೀದ್ ಅಹಮದ್ (95ರನ್, 248 ಎಸೆತ, 16 ಬೌಂಡರಿ) ಶತಕ ವಂಚಿತ ಬ್ಯಾಟಿಂಗ್​ನಿಂದಾಗಿ ನಿರಾಸೆಯಲ್ಲಿ ಮುಳುಗಿತು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ಮುಕ್ತಾಯಗೊಂಡ ಪಂದ್ಯದಲ್ಲಿ 2 ವಿಕೆಟ್​ಗೆ 58ರನ್​ಗಳಿಂದ ದಿನದಾಟ ಆರಂಭಿಸಿದ ಪ್ರವಾಸಿ ಬಂಗಾಳ ತಂಡ 4 ವಿಕೆಟ್​ಗೆ 249 ರನ್​ಗಳಿಸಿದ್ದ ವೇಳೆ ಮಳೆ ಸುರಿದ ಕಾರಣ ಪಂದ್ಯ ಸ್ಥಗಿತಗೊಳಿಸಲಾಯಿತು. ಭಾರಿ ಮಳೆಯಿಂದಾಗಿ ದಿನದಾಟದ ಅಂತಿಮ ಅವಧಿಯ ಸುಮಾರು 57 ನಿಮಿಷಗಳ ಆಟ ರದ್ದುಗೊಂಡಿತು. ಈ ವೇಳೆಗೆ ಕರ್ನಾಟಕದ ಮೊದಲ ಇನಿಂಗ್ಸ್ ಮುನ್ನಡೆಯ 225ರನ್ ಚುಕ್ತಾ ಮಾಡಿದ್ದ ಪ್ರವಾಸಿ ತಂಡ 24 ರನ್​ಗಳ ಅಲ್ಪಮುನ್ನಡೆ ಗಳಿಸಿತ್ತು. ಮೊದಲ ಇನಿಂಗ್ಸ್​ನಲ್ಲಿ ಬಂಗಾಳ 312ರನ್​ಗಳಿಸಿದ್ದರೆ, ಕರ್ನಾಟಕ 9 ವಿಕೆಟ್​ಗೆ 537ರನ್​ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು. ಇದರಿಂದ 2 ಪಂದ್ಯಗಳಿಂದ 4 ಅಂಕ ಸಂಪಾದಿಸಿರುವ ಕರ್ನಾಟಕ ‘ಬಿ’ ಗುಂಪಿನಲ್ಲಿ 4 ಸ್ಥಾನ ಪಡೆಯಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com