ನವದೆಹಲಿ: ಭಾರತದ ತಂಡದಲ್ಲಿ ಕೆಲವು ವೇಗಿಗಳ ಅಸ್ಥಿರ ಪ್ರದರ್ಶನವು ದಕ್ಷಿಣ ಆಫ್ರಿಕಾ ವಿರುದ್ಧ ಕೊನೆಯ ಎರಡು ಏಕದಿನ ಪಂದ್ಯಗಳಲ್ಲಿ ಇಶಾಂತ್ ಶರ್ಮಾರನ್ನು ತಂಡದಲ್ಲಿ ಸೇರಿಸಿಕೊಳ್ಳುವ ಸಾಧ್ಯತೆಯಿದೆ. ಏಕದಿನ ಸರಣಿಯ ಉಳಿದ ಪಂದ್ಯಗಳಿಗೆ ಮತ್ತು ಮೊದಲ ಎರಡು ಟೆಸ್ಟ್ ಪಂದ್ಯಗಳಿಗೆ ಸೋಮವಾರ ಆಯ್ಕೆದಾರರು ಸಭೆ ಸೇರಲಿದ್ದಾರೆ.
ಕೊನೆಯ ಎರಡು ಏಕದಿನಗಳಿಗೆ ಟೆಸ್ಟ್ ವೇಗಿ ಇಶಾಂತ್ ಶರ್ಮಾ ಅವರನ್ನು ಆಡಿಸುವ ಅವಕಾಶ ಹೆಚ್ಚಾಗಿದೆ. ತಂಡದ ಮ್ಯಾನೇಜ್ಮೆಂಟ್ಗೆ ಇಶಾಂತ್ ಶರ್ಮಾ ನೀಡುತ್ತಿರುವ ಪ್ರದರ್ಶನ ತೃಪ್ತಿ ನೀಡಿದೆ. ರಣಜಿ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ಮತ್ತು ಅವರ ಅನುಭವ ಮತ್ತು ನಿಖರತೆಯನ್ನು ಬಳಸಿಕೊಳ್ಳಬಹುದು ಎಂದು ಮೂಲಗಳು ತಿಳಿಸಿವೆ.
ಹರ್ಯಾಣದ ವಿರುದ್ಧ ಪಂದ್ಯದಲ್ಲಿ ಇಶಾಂತ್ ನಿಖರತೆ ಮತ್ತು ಮೊನಚಿನ ಬೌಲಿಂಗ್ ಪ್ರದರ್ಶನವನ್ನು ಆಯ್ಕೆದಾರರ ಸಮಿತಿಯ ವಿಕ್ರಂ ರಾಥೋರ್ ವೀಕ್ಷಿಸಿದ್ದಾರೆ. ಟೆಸ್ಟ್ ಪಂದ್ಯಗಳಲ್ಲಿ ಇಶಾಂತ್ ದಾಳಿಯ ಮುಂಚೂಣಿಯಲ್ಲಿದ್ದರೆ, ಏಕದಿನ ಪಂದ್ಯಗಳಲ್ಲಿ ಅವರನ್ನು ಕೈಬಿಡುತ್ತಿರುವುದು ಜನರ ಬಾಯಿಗೆ ಆಹಾರವಾಗಿದೆ.
Advertisement