ಜತೆಗೆ ಮೂರು ತಿಂಗಳ ಹಿಂದೆ ಇದೇ ಬಾಂಗ್ಲಾದೇಶ ಎದುರು ಅನುಭವಿಸಿದ 1-2 ಟೆಸ್ಟ್ ತಿರುಗೇಟು ನೀಡಲೂ ಸಂಕಲ್ಪ ತೊಟ್ಟಿದೆ. ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಏಕದಿನ ಸರಣಿಯನ್ನು ಜಯಿಸುವ ಮೂಲಕ ಹರಿಣಗಳ ವಿರುದ್ಧದ ಪಂದ್ಯಾವಳಿಗೆ ಭಾರತ ತಕ್ಕ ಸಿದ್ಧತೆ ಮಾಡಿಕೊಳ್ಳಬೇಕಿದೆ. ಈ ದಿಸೆಯಲ್ಲಿ ಕರ್ನಾಟಕದ ಮಯಾಂಕ್ ಅಗರ್ವಾಲ್, ಮನೀಶ್ ಪಾಂಡೆ, ಕರುಣ್ ನಾಯರ್ ಅಲ್ಲದೆ, ರಾಷ್ಟ್ರೀಯ ತಂಡದ ಎಡಗೈ ಆಟಗಾರ ಸುರೇಶ್ ರೈನಾ, ಧವಳ್ ಕುಲಕರ್ಣಿ ಹಾಗೂ ಕರಣ್ ಶರ್ಮಾ ಕೂಡ ಈ ಸರಣಿಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.