ನವದೆಹಲಿ: ಭಾರತದ ಯುವ ಸ್ಕ್ವಾಶ್ ಆಟಗಾರ ರವಿ ದೀಕ್ಷಿತ್ ತನಗೆ ಪ್ರಾಯೋಜಕರು ಸಿಗುತ್ತಿಲ್ಲ, ಆದ್ದರಿಂದ ಕಿಡ್ನಿ ಮಾರಲು ತೀರ್ಮಾನಿಸಿದ್ದೀನಿ ಎಂದು ಸಾಮಾಜಿಕ ತಾಣದಲ್ಲಿ ಬರೆದುಕೊಂಡಿದ್ದರು. ಸ್ಕ್ವಾಶ್ ಆಟಗಾರನೊಬ್ಬನಿಗೆ ಒದಗಿ ಬಂದಿರುವ ಈ ಅವಸ್ಥೆ ಬಗ್ಗೆ ಮಾಧ್ಯಮಗಳು ಸುದ್ದಿ ಮಾಡುತ್ತಿದ್ದಂತೆ ರವಿ, ತಮ್ಮ ಸೋಷ್ಯಲ್ ಮೀಡಿಯಾ ಪೋಸ್ಟ್ ಬಗ್ಗೆ ಸ್ಪಷ್ಟನೆ ನೀಡಲು ಮುಂದೆ ಬಂದಿದ್ದಾರೆ.