ಕ್ರಿಮಿನಲ್ ಕೇಸ್ ಗೆ ಸುಪ್ರೀಂ ತಡೆಯಾಜ್ಞೆ: ಮಹೇಂದ್ರ ಸಿಂಗ್ ಧೋನಿ ನಿರಾಳ

ಜಾಹೀರಾತು ಒಂದರಲ್ಲಿ ತನ್ನನ್ನು ಭಗವಾನ್ ವಿಷ್ಣುವಿನಂತೆ ತೋರಿಸಿಕೊಂಡು ಕೈಯ್ಯಲ್ಲಿ ಶೂ ಹಿಡಿದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ
ಮಹೇಂದ್ರ ಸಿಂಗ್ ಧೋನಿ
ಮಹೇಂದ್ರ ಸಿಂಗ್ ಧೋನಿ
Updated on

ನವದೆಹಲಿ: ಜಾಹೀರಾತು ಒಂದರಲ್ಲಿ ತನ್ನನ್ನು ಭಗವಾನ್ ವಿಷ್ಣುವಿನಂತೆ ತೋರಿಸಿಕೊಂಡು ಕೈಯ್ಯಲ್ಲಿ ಶೂ ಹಿಡಿದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಿಕೆಟಿಗ ಮಹೇಂದ್ರ ಸಿಂಗ್ ದೋನಿ ವಿರುದ್ಧದ ಕ್ರಿಮಿನಲ್ ಖಟ್ಲೆಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದೆ.

ಪ್ರಕರಣವನ್ನು ಅನಂತಪುರದಿಂದ ಬೆಂಗಳೂರಿಗೆ ವರ್ಗಾಯಿಸುವಂತೆ ಕೋರಿ ಧೋನಿ ಅವರು ಸಲ್ಲಿಸಿರುವ ಮನವಿ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಆಂಧ್ರಪ್ರದೇಶ ಪೊಲೀಸರಿಗೆ ಸುಪ್ರೀಂಕೋರ್ಟ್ ಸೂಚಿಸಿದೆ.

ನಿಯತಕಾಲಿಕವೊಂದರ ಜಾಹೀರಾತಿನಲ್ಲಿ ‘ಭಗವಾನ್ ವಿಷ್ಣುವಿನಂತೆ’ ತೋರಿಸಿಕೊಳ್ಳುವ ಮೂಲಕ ಧೋನಿ ಅವರು ಹಿಂದು ದೇವರಿಗೆ ಕಳಂಕ ತಂದಿದ್ದಾರೆ ಎಂದು ಆರೋಪಿಸಿ ಪ್ರಕರಣ ದಾಖಲಿಸಲಾಗಿತ್ತು. ಈ ಪ್ರಕರಣವನ್ನು ಅನಂತಪುರದಿಂದ ಬೆಂಗಳೂರಿಗೆ ವರ್ಗಾಯಿಸುವಂತೆಯೂ ಧೋನಿ ಕೋರಿದ್ದರು. ಅನಂತಪುರದ ನ್ಯಾಯಾಲಯವು ಪ್ರಕರಣಕ್ಕೆ ಸಂಬಂಧಿಸಿದಂತೆ ಧೋನಿ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿ ಮಾಡಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com