ಖೇಲೋ ಇಂಡಿಯಾ ಕಾರ್ಯಕಾರಣಿ ಸದಸ್ಯೆಯಾಗಿ ಅಂಜು ಬೋಬಿ ಜಾರ್ಜ್ ಆಯ್ಕೆ

ಒಲಿಂಪಿಯನ್ ಹಾಗೂ ಕ್ರೀಡಾಪಟು ಅಂಜು ಬೋಬಿ ಜಾರ್ಜ್ ಇತ್ತೀಚೆಗಷ್ಟೇ ಕೇರಳ ಕ್ರೀಡಾ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ್ದು, ಇದೀಗ ಕೇಂದ್ರ ಸರ್ಕಾರ...
ಅಂಜು ಬೋಬಿ ಜಾರ್ಜ್
ಅಂಜು ಬೋಬಿ ಜಾರ್ಜ್

ನವದೆಹಲಿ: ಒಲಿಂಪಿಯನ್ ಹಾಗೂ ಕ್ರೀಡಾಪಟು ಅಂಜು ಬೋಬಿ ಜಾರ್ಜ್ ಇತ್ತೀಚೆಗಷ್ಟೇ ಕೇರಳ ಕ್ರೀಡಾ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ್ದು, ಇದೀಗ ಕೇಂದ್ರ ಸರ್ಕಾರ ಖೇಲೋ ಇಂಡಿಯಾ ಯೋಜನೆಯ ಕಾರ್ಯಕಾರಿಣಿ ಸಮಿತಿಯ ಸದಸ್ಯೆಯನ್ನಾಗಿ ನೇಮಕ ಮಾಡಿದೆ.

ಗುಜರಾತ್ ಸರ್ಕಾರದ ಖೇಲ್ ಮಹಾಕುಂಭ್ ಯೋಜನೆಯ ಮಾದರಿಯಾಗಿರುವ ಖೇಲೋ ಇಂಡಿಯಾ ದೇಶದ ಎಲ್ಲ ಭಾಗಗಳಿಂದಲೂ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ 27 ವಿಭಾಗಗಳಲ್ಲಿ ಸ್ಪರ್ಧೆ ಕೈಗೊಳ್ಳುವುದು ಇದರ ಮುಖ್ಯ ಉದ್ದೇಶವಾಗಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿಶೇಷ ಆಸಕ್ತಿಯ ಮೇರೆಗೆ ಕ್ರೀಡಾ ಸಚಿವಾಲಯವು ಈ ಯೋಜನೆಯನ್ನು ಕಾರ್ಯರೂಪಕ್ಕೆ ತಂದಿದ್ದು, ಈ ಯೋಜನೆಯ ಭಾಗಿಯಾಗಲು ತನಗೆ ಬಹಳ ಖುಷಿಯಾಗುತ್ತದೆ ಎಂದು ಅಂಜು ಬೋಬಿ ಜಾರ್ಜ್ ಪ್ರತಿಕ್ರಿಯೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com