ಭಾರತ ಹಾಕಿ ತಂಡದಲ್ಲಿ ಕರ್ನಾಟಕದ 4 ಆಟಗಾರರಿಗೆ ಸ್ಥಾನ

ರಿಯೊ ಒಲಿಂಪಿಕ್ಸ್ ಗೆ ಸಜ್ಜಾಗುವ ನಿಟ್ಟಿನಲ್ಲಿ ಮಹತ್ವದ ಎಫ್ಐಎಚ್ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಕೆಲ ಅನುಭವಿ ಆಟಗಾರರಿಗೆ ಹಾಕಿ ಇಂಡಿಯಾ ವಿಶ್ರಾಂತಿ...
ಕರ್ನಾಟಕ ಆಟಗಾರರು
ಕರ್ನಾಟಕ ಆಟಗಾರರು

ಬೆಂಗಳೂರು: ರಿಯೊ ಒಲಿಂಪಿಕ್ಸ್ ಗೆ ಪೂರ್ವ ಸಿದ್ಧತಾ ಟೂರ್ನಿಯಾಗಿರುವ ಎಫ್ಐಎಚ್ ಚಾಂಪಿಯನ್ಸ್ ಟ್ರೋಫಿಗೆ ಕೆಲ ಅನುಭವಿ ಆಟಗಾರರಿಗೆ ಹಾಕಿ ಇಂಡಿಯಾ ವಿಶ್ರಾಂತಿ ನೀಡಿದ್ದು, ರಾಜ್ಯದ ನಾಲ್ವರು ಸ್ಥಾನ ಪಡೆದಿದ್ದಾರೆ.

ಭಾರತ ಹಾಕಿ ತಂಡದ ನಾಯಕ ಸರ್ದಾರ್ ಸಿಂಗ್, ಜಸ್ಮೀತ್ ಗೌರ್ ಮತ್ತು ರೂಪಿಂದರ್ ಪಾಲ್ ಸಿಂಗ್ ಗೆ ವಿಶ್ರಾಂತಿ ನೀಡಲಾಗಿದ್ದು, ಸರ್ದಾರ್ ಬದಲಿಗೆ ಗೋಲ್ ಕೀಪರ್ ಪಿಆರ್ ಶ್ರೀಜೇಶ್ ತಂಡವನ್ನು ಮುನ್ನಡೆಸಲಿದ್ದಾರೆ.

ಲಂಡನ್ ನಲ್ಲಿ ಜೂನ್ 10 ರಿಂದ 17ರವರೆಗೆ ಚಾಂಪಿಯನ್ಸ್ ಟ್ರೋಫಿ ನಡೆಯಲಿದೆ. ಕನ್ನಡಿಗರಾದ ಎಸ್ ವಿ ಸುನೀಲ್, ವಿಆರ್ ರಘುನಾಥ್, ಎಸ್ ಕೆ ಉತ್ತಪ್ಪ, ನಿಕಿನ್ ತಿಮ್ಮಯ್ಯ ತಂಡದಲ್ಲಿ ಸ್ಥಾನ ಪಡೆದ ಕನ್ನಡಿಗರು.

ಭಾರತ ಹಾಕಿ ತಂಡ
ಪಿಆರ್ ಶ್ರೀಜೇಶ್(ನಾಯಕ), ವಿಕಾಸ್ ದಹಿಯಾ, ಪ್ರದೀಪ್ ಮೊರ್, ಎಸ್ ವಿ ಸುನೀಲ್, ವಿಆರ್ ರಘುನಾಥ್, ಎಸ್ ಕೆ ಉತ್ತಪ್ಪ, ನಿಕಿನ್ ತಿಮ್ಮಯ್ಯ, ಕೋತಜಿತ್ ಸಿಂಗ್, ಸುರೇಂದರ್ ಕುಮಾರ್, ಹರ್ಮನ್ ಪ್ರೀತ್ ಸಿಂಗ್, ಡಾನಿಶ್ ಮುಜ್ತಬಾ, ಚಿಂಗ್ಲೇನ್ಸನಾಸಿಂಗ್, ಮನ್ ಪ್ರೀತ್ ಸಿಂಗ್, ದೇವೇಂದರ್ ವಾಲ್ಮೀಕಿ, ಹರ್ಜಿತ್ ಸಿಂಗ್, ತಲ್ವಿಂದರ್ ಸಿಂಗ್, ಮನ್ದೀಪ್ ಸಿಂಗ್, ಆಕಾಶ್ ದೀಪ್ ಸಿಂಗ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com