ಏಶ್ಯನ್ ಚಾಂಪಿಯನ್ಸ್ ಟ್ರೋಫಿಯನ್ನು ಉರಿ ದಾಳಿ ಹುತಾತ್ಮರಿಗೆ ಅರ್ಪಿಸಿದ ಭಾರತ ಹಾಕಿ ತಂಡ

ಭಾರತ ಹಾಕಿ ತಂಡದ ನಾಯಕ ಪಿ ಆರ್ ಶ್ರೀಜೇಶ್ ಏಶ್ಯನ್ ಚಾಂಪಿಯನ್ ಟ್ರೋಫಿ ಹಾಕಿ ಕಪ್ ಅನ್ನು ಉರಿ ದಾಳಿ ಹುತಾತ್ಮ ಯೋಧರು ಹಾಗೂ ಅವರ ಕುಟುಂಬಕ್ಕೆ ಅರ್ಪಿಸಿದ್ದಾರೆ...
ಭಾರತ ಹಾಕಿ ತಂಡ
ಭಾರತ ಹಾಕಿ ತಂಡ
ಭಾರತ ಹಾಕಿ ತಂಡದ ನಾಯಕ ಪಿ ಆರ್ ಶ್ರೀಜೇಶ್ ಏಶ್ಯನ್ ಚಾಂಪಿಯನ್ ಟ್ರೋಫಿ ಹಾಕಿ ಕಪ್ ಅನ್ನು ಉರಿ ದಾಳಿ ಹುತಾತ್ಮ ಯೋಧರು ಹಾಗೂ ಅವರ ಕುಟುಂಬಕ್ಕೆ ಅರ್ಪಿಸಿದ್ದಾರೆ. 
ಮಲೇಶ್ಯದಲ್ಲಿ ನಡೆದ ಕೂಟದ ಫೈನಲ್ ಪಂದ್ಯದಲ್ಲಿ ಭಾರತ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 3-2 ಗೋಲುಗಳಿಂದ ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ನಂತರ ವಿಜೇತ ತಂಡ ಭಾರತಕ್ಕೆ ಮರಳಿದ್ದು ಈ ವೇಳೆ ನಾಯಕ ಶ್ರೀಜೇಶ್ ಮಾಧ್ಯಮದವರೊಂದಿಗೆ ಮಾತನಾಡುತ್ತಾ ದೇಶಕ್ಕಾಗಿ ಪ್ರಾಣ ತೆತ್ತವರಿಗೆ ಈ ಟ್ರೋಫಿಯನ್ನು ಅರ್ಪಿಸುವುದಾಗಿ ಹೇಳಿದರು. 
ಕುಟುಂಬವನ್ನೆಲ್ಲ ತೊರೆದು ಪ್ರಾಣವನ್ನು ಲೆಕ್ಕಿಸದೆ ಗಡಿಯಲ್ಲಿ ಹೋರಾಡಿ ವೀರ ಮರಣ ಹೊಂದುವ ಯೋಧರಿಗೆ ಈ ವಿಜಯವನ್ನು ಅರ್ಪಿಸುವುದಾಗಿ ಹೇಳಿದರು. ಗಡಿಯಲ್ಲಿ ಭಾರತೀಯ ಯೋಧರು ಪಾಕ್ ಸೈನಿಕರೊಂದಿಗೆ ಹೋರಾಡುವಂತೆ ನಾವು ಪಾಕಿಸ್ತಾನದ ಆಟಗಾರರೊಂದಿಗೆ ಹೋರಾಡಿ ಜಯ ಸಾಧಿಸಿದ್ದೇವೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com