ಕೆಪಿಎಲ್ ಗೂ ತಟ್ಟಿದ ಕಾವೇರಿ ಬಿಸಿ: ಮೈಸೂರು ಬದಲಿಗೆ ಹುಬ್ಬಳಿಯಲ್ಲಿ ಚಾಲನೆ

ಕಾವೇರಿ ಹೋರಾಟದ ಬಿಸಿ ಕರ್ನಾಟಕ ಪ್ರೀಮಿಯರ್ ಲೀಗ್ ಗೂ ತಟ್ಟಿದ್ದು, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕಾವೇರಿ ಹೋರಾಟ ಮುಂದುವರಿದಿರುವ ಹಿನ್ನೆಲೆಯಲ್ಲಿ...
ಕೆಪಿಎಲ್
ಕೆಪಿಎಲ್

ಬೆಂಗಳೂರು: ಕಾವೇರಿ ಹೋರಾಟದ ಬಿಸಿ ಕರ್ನಾಟಕ ಪ್ರೀಮಿಯರ್ ಲೀಗ್ ಗೂ ತಟ್ಟಿದ್ದು, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕಾವೇರಿ ಹೋರಾಟ ಮುಂದುವರಿದಿರುವ ಹಿನ್ನೆಲೆಯಲ್ಲಿ ಐದನೇ ಆವೃತ್ತಿಯ ಕೆಪಿಎಲ್ ಟಿ20ಯ ವೇಳಾಪಟ್ಟಿಯಲ್ಲಿ ಪ್ರಮುಖ ಬದಲಾವಣೆ ಮಾಡಲಾಗಿದೆ.

ಮೈಸೂರಿನಲ್ಲಿ ಆರಂಭವಾಗಬೇಕಾಗಿದ್ದ ಟೂರ್ನಿಗೆ ಈಗ ಹುಬ್ಬಳ್ಳಿಯಲ್ಲಿ ಚಾಲನೆ ನೀಡಲು ನಿರ್ಧರಿಸಲಾಗಿದೆ. ಮಂಗಳವಾರ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್ಸಿಎ) ನಡೆಸಿದ ತುರ್ತು ಸಭೆಯಲ್ಲಿ ವೇಳಾಪಟ್ಟಿಯಲ್ಲಿ ಬದಲಾವಣೆ ನಿರ್ಧಾರ ಮಾಡಲಾಗಿದೆ.

ಕೆಪಿಎಲ್ ಟೂರ್ನಿಯು ನಿಗದಿತ ವೇಳಾಪಟ್ಟಿಗಿಂತ ಒಂದು ದಿನ ಮುಂದೂಡಲಾಗಿದ್ದು. ಸೆಪ್ಟೆಂಬರ್ 16ರಂದು ಆರಂಭವಾಗಬೇಕಿದ್ದ ಟೂರ್ನಿ ಸೆಪ್ಟೆಂಬರ್ 17ರಂದು ಆರಂಭಗೊಳ್ಳಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com