ಲಖನೌ: ಪ್ರೊ ಕಬಡ್ಡಿಯ 5ನೇ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್ ತಂಡ ಹೀನಾಯ ಪ್ರದರ್ಶನ ನೀಡುತ್ತಿದ್ದು ಹ್ಯಾಟ್ರಿಕ್ ಸೋಲು ಕಂಡಿದೆ.
ಲಖನೌನ ಬಾಬು ಬನರಾಸಿ ದಾಸ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪಿಂಕ್ ಪ್ಯಾಂಥರ್ಸ್ ತಂಡ 30-28 ಅಂಕಗಳಿಂದ ಬುಲ್ಸ್ ತಂಡವನ್ನು ಮಣಿಸಿದೆ.
ಪಂದ್ಯ ವೀಕ್ಷಿಸಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಲಖನೌನಲ್ಲಿ ನಡೆದ ಮೊದಲ ದಿನದ ಪಂದ್ಯವನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವೀಕ್ಷಿಸಿದರು. ಇವರಿಗೆ ಮಾಜಿ ಕ್ರಿಕೆಟಿಗ ಹಾಗೂ ಯುಪಿ ಕ್ರೀಡಾ ಸಚಿವ ಚೇತನ್ ಚೌಹಾನ್ ಸಾಥ್ ನೀಡಿದರು.