ಆಯ್ಕೆ ಸಮಿತಿ ಕೀಡಾ ಸಚಿವಾಲಯಕ್ಕೆ ಸಲ್ಲಿಸಿರುವ ಶಿಫಾರಸ್ಸು ಪಟ್ಟಿಯಲ್ಲಿ 16 ಇತರ ಕ್ರೀಡಾ ಪಟುಗಳ ಹೆಸರಿನಲ್ಲಿ ಚರ್ವಾಸಿಯಾ ಅವರ ಹೆಸರೂ ಇದೆ. ಕೋಲ್ಕತ್ತಾ ಮೂಲದವರಾಗಿರುವ ಚರ್ವಾಸಿಯಾ ಅವರಿಗೆ ಆಗಸ್ಟ್ 29 ರಂದು ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಅರ್ಜುನ ಪ್ರಶಸ್ತಿ ಸ್ವೀಕರಿಸುತ್ತಿರುವ ಭಾರತದ 19ನೇ ಗಾಲ್ಫ್ ಆಟಗಾರ ಚಾರ್ವಾಸಿಯಾ ಆಗಿದ್ದಾರೆ.