ನವದೆಹಲಿ: ಇಂದು ವಿವಾಹ ಜೀವನಕ್ಕೆ ಕಾಲಿಟ್ಟ ಭಾರತದ ಖ್ಯಾತ ಕುಸ್ತಿ ಪಟು ಯೋಗೇಶ್ವರ್ ದತ್ ಕೇವಲ ಒಂದು ರೂಪಾಯಿ ವರದಕ್ಷಿಣೆ ರಹಸ್ಯದ ಬಗ್ಗೆ ಸ್ವತಃ ಯೋಗೇಶ್ವರ್ ದತ್ ಬಹಿರಂಗ ಪಡಿಸಿದ್ದಾರೆ.
ಹರ್ಯಾಣಾದ ಕಾಂಗ್ರೆಸ್ ನಾಯಕನ ಪುತ್ರಿ ಶೀತಲ್ ಜತೆ ವಿವಾಹವಾಗಿರುವ ಯೋಗೇಶ್ವರ್ ದತ್ ಒಂದು ರೂಪಾಯಿ ವರದಕ್ಷಿಣೆ ಪಡೆದು ಆದರ್ಶ ಮೆರೆದಿದ್ದರು ಎಂದು ಸುದ್ದಿಯಾಗಿತ್ತು. ಹಾಗಿದ್ದರೆ ದತ್ ವರದಕ್ಷಿಣೆ ರೂಪದಲ್ಲಿ ಹಣ ಪಡೆದರೇ ಎಂಬುದಕ್ಕೆ ಉತ್ತರಿಸಿರುವ ಅವರು, ಗಿ ತಾನು ಒಂದು ರೂಪಾಯಿ ಪಡೆದಿದ್ದು, ವರದಕ್ಷಿಣೆ ಎಂದಲ್ಲ, ಅದು ಶಗುನ್ ರೂಪದಲ್ಲಿ ಪಡೆದಿದ್ದೆನಷ್ಟೆ.
ಒಂದು ರೂಪಾಯಿ ಕೂಡಾ ವರದಕ್ಷಿಣೆ ಪಡೆಯದೇ ವಿವಾಹವಾಗುತ್ತಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಸಂಪ್ರದಾಯದ ಪ್ರಕಾರ ನಿಶ್ಚಿತಾರ್ಥದ ದಿನ ಒಂದು ರೂಪಾಯಿ ಪಡೆದಿದ್ದಾಗಿ ತಿಳಿಸಿದ್ದಾರೆ.
Advertisement