ನವದೆಹಲಿ: ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆದ 2018ರಲ್ಲಿ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಚಿನ್ನ ಗೆದ್ದ ಬರೀ 16 ವರ್ಷದ ಶೂಟರ್ ಮನು ಭಾರಕ್ ಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವಮಾನ ಮಾಡಲಾಗಿದೆ ಎಂದು ಕೆಲ ಪತ್ರಿಕೆಗಳು ವರದಿ ಮಾಡಿದೆ.
ಕಾಮನ್ವೆಲ್ತ್ 10 ಮೀ. ಪಿಸ್ತೂಲ್ ನಲ್ಲಿ ಚಿನ್ನ ಗೆದ್ದ ಕಾರಣ ಹರಿಯಾಣದಲ್ಲಿ ಭಾಕರ್ ಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಘಟನೆ ನಡೆದಿದೆ ಎಂದು ಹೇಳಲಾಗಿದೆ.
ಸನ್ಮಾನ ಕಾರ್ಯಕ್ರಮದಲ್ಲಿ ಮೊದಲಿಗೆ ಮನು ಭಾಕರ್ ಗೆ ಹಾರ ಹಾಕಿ ಕುರ್ಚಿಯೊಂದರಲ್ಲಿ ಕೂರಿಸಲಾಗಿತ್ತು. ಕ್ರಮೇಣ ಗಣ್ಯ ಅತಿಥಿಗಳ ಸಂಖ್ಯೆ ಜಾಸ್ತಿಯಾದ ಕೂಡಲೇ ಭಾಕರ್ ಗೆ ಕೆಳ ಕೂರವಂತೆ ಸೂಚಿಸಲಾಯಿತು. ಪರಿಣಾಮ ಸನ್ಮಾನಿಸಲ್ಪಟ್ಟ ವ್ಯಕ್ತಿಯಾದರೂ ನೆಲದ ಮೇಲೆ ಕುಳಿತರು ಎಂದು ವರದಿಯಾಗಿದೆ.
ಈ ವರದಿಗಳನ್ನು ಸ್ವತಃ ಭಾಕರ್ ತಂದೆ ರಾಮ್ ಕಿಶನ್ ಭಾಕರ್ ನಿರಾಕರಿಸಿದ್ದಾರೆ. ವರದಿಗಳು ಹೇಗೆಯೇ ಇರಲಿ, ಅವೆಲ್ಲ ಸುಳ್ಳು. ಅಂತಹದ್ದೆಲ್ಲ ಏನು ನಡೆದಿಲ್ಲ ಎಂದು ಹೇಳಿದ್ದಾರೆ.