ಮುಂಬೈ: ಭಾರತ ಖ್ಯಾತ ಬ್ಯಾಡ್ಮಿಂಟನ್ ತಾರೆ ಕಿದಂಬಿ ಶ್ರೀಕಾಂತ್ ವರ್ಷದ ಶ್ರೇಷ್ಠ ಕ್ರೀಡಾಪಟು ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. .ವಿಶ್ವದ ಮೂರನೇ ಶ್ರೇಯಾಂಕಿತರಾಗಿರುವ ಕಿದಂಬಿ ಶ್ರೀಕಾಂತ್ ಅವರು ಮಹೀಂದ್ರ ಸ್ಕಾರ್ಪಿಯೋ ಟೈಮ್ಸ್ ಆಫ್ ಇಂಡಿಯಾದ ವರ್ಷದ ಶ್ರೇಷ್ಠ ಕ್ರೀಡಾಪಟು ಗೌರವಕ್ಕೆ ಪಾತ್ರರಾಗಿದ್ದಾರೆ. .ಕಿದಂಬಿ ಶ್ರೀಕಾಂತ್ ಅವರು ಜಿತು ರಾಯ್ ಮತ್ತು ಪಿವಿ ಸಿಂಧು ಬಳಿಕ ಈ ಗೌರವಕ್ಕೆ ಪಾತ್ರವಾದ ಭಾರತದ ಮೂರನೇ ಆಟಗಾರ ಎನಿಸಿಕೊಂಡಿದ್ದಾರೆ. .2017ರಲ್ಲಿ ಹಲವು ಟೂರ್ನಿಗಳಲ್ಲಿ ಗೆಲವು ಸಾಧಿಸಿದ್ದು ಇವುಗಳನ್ನು ಪರಿಗಣಿಸಿ ಶ್ರೀಕಾಂತ್ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ. .Follow KannadaPrabha channel on WhatsApp KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ Subscribe to KannadaPrabha YouTube Channel and watch Videos