ಗುರುವಾರ ಮಾತನಾಡಿದ ಡೇವಿಡ್ ಜೇಮ್ಸ್ ಅವರು, ನಿಜಕ್ಕೂ ಸಚಿನ್ ತೆಂಡೂಲ್ಕರ್ ರಂತಹ ಕ್ರೀಡಾಪಟು ತಂಡದ ಮಾಲೀಕರಾಗಿರುವುದು ನಿಜಕ್ಕೂ ನಮಗೆ ಗೌರವದ ಸಂಗತಿಯಾಗಿದೆ. ತಂಡಕ್ಕೆ ಸಚಿನ್ ಸ್ಪೂರ್ತಿಯ ಚಿಲುಮೆಯಾಗಿದ್ದು, ಅಗತ್ಯ ಬಿದ್ದಾಗಲೆಲ್ಲಾ ಆಟಗಾರರನ್ನು ಹುರಿದುಂಬಿಸುವ ಕೆಲಸ ಮಾಡುತ್ತಿರುತ್ತಾರೆ. ತಂಡ ಒತ್ತಡಕ್ಕೆ ಸಿಲುಕಿದಾಗಲೆಲ್ಲಾ ತಂಡದ ಆಟಗಾರರೊಂದಿಗೆ ಖುದ್ಧಾಗಿ ಮಾತನಾಡಿ ಒತ್ತಡ ನಿವಾರಿಸುತ್ತಾರೆ. ಅವರ ಶಾಂತ ಚಿತ್ತ ಮತ್ತು ತಾಳ್ಮೆಯೇ ನಮಗೆಲ್ಲರಿಗೂ ಸ್ಪೂರ್ತಿ ನೀಡುತ್ತದೆ ಎಂದು ಹೇಳಿದ್ದಾರೆ.