ಕೆಬಿಸಿ ಬಹುಮಾನದ ಮೊತ್ತವನ್ನು ಕ್ಯಾನ್ಸರ್ ಆಸ್ಪತ್ರೆಗೆ ನೀಡಿದ ಪಿವಿ ಸಿಂಧು

ಒಲಂಪಿಕ್ ಬೆಳ್ಳಿ ಪದಕ ವಿಜೇತೆಯಾದ ಭಾರತ್ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ರಿಯಾಲಿಟಿ ಶೋ ಒಂದರಲ್ಲಿ ತಾವು ಗೆದ್ದ 25 ಲಕ್ಷ ರೂ. ಹಣವನ್ನು ಕಾನ್ಸರ್ ಆಸ್ಪತ್ರೆಗೆ ದಾನವಾಗಿ ನೀಡಿದ್ದಾರೆ.
ಪಿ ವಿ  ಸಿಂಧು
ಪಿ ವಿ ಸಿಂಧು
ಹೈದರಾಬಾದ್: ಒಲಂಪಿಕ್ ಬೆಳ್ಳಿ ಪದಕ ವಿಜೇತೆಯಾದ ಭಾರತ್ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ರಿಯಾಲಿಟಿ ಶೋ ಒಂದರಲ್ಲಿ ತಾವು ಗೆದ್ದ 25 ಲಕ್ಷ ರೂ. ಹಣವನ್ನು ಕಾನ್ಸರ್ ಆಸ್ಪತ್ರೆಗೆ ದಾನವಾಗಿ ನೀಡಿದ್ದಾರೆ.
ಹಿರಿಯ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ನಡೆ೩ಸಿಕೊಡುವ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿಂಧು ಒಟ್ಟು 25 ಲಕ್ಷ ರೂ. ಬಹುಮಾನ ಗಳಿಸಿದ್ದರು. ಇದೀಗ ಅದ್ಷ್ಟೂ ಹಣವನ್ನು ಇಂಡೋ ಅಮೆರಿಕನ್ ಕ್ಯಾನ್ಸರ್ ಆಸ್ಪತ್ರೆಯೊಂದಕ್ಕೆ ಕೊಡುಗೆಯಾಗಿ ನೀಡಿದ್ದಾರೆ ಎಂದು ವರದಿಯಾಗಿದೆ.
ತೆಲುಗಿನ ಖ್ಯಾತ ನಟ ಬಾಲಯ್ಯ ನಡೆಸುವ ಇಂಡೊ ಅಮೇರಿಕನ್ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆಗೆ ಸಿಂಧು ತಮ್ಮ ಬಹುಮಾನದ ಮೊತ್ತವನ್ನು ನೀಡಿದ್ದು ಬಾಲಯ್ಯಗೆ ರೂ.25  ಲಕ್ಷದ ಚೆಕ್ ನೀಡಿದ್ದಾರೆ. ಬ್ಯಾಡ್ಮಿಂಟನ್ ಆಟಗಾರ್ತಿಯಿಂದ ನೆರವನ್ನು ಪಡೆದ ಬಾಲಯ್ಯ ಸಿಂಧು ಅವರ ಕೆಲಸವನ್ನು ಪ್ರಶಂಸಿಸಿದ್ದು ಅವರ ಕೆಲಸದಿಂದ ಇನ್ನಷ್ಟು ಜನ ಸ್ಪೂರ್ತಿ ಪಡೆವಂತಾಗಲಿ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com