ನವದೆಹಲಿ: ಭಾರತೀಯ ವೀಲ್ ಚೇರ್ ಕ್ರಿಕೆಟ್ ತಂಡಕ್ಕೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ 4ಲಕ್ಷ ರು.ಹಣ ದೇಣಿಗೆ ನೀಡಿದ್ದಾರೆ.
ವೀಲ್ ಚೇರ್ ಕ್ರಿಕೆಟ್ ಇಂಡಿಯಾ ಸೆಕ್ರೆಟರಿ ಜನರಲ್ ಪ್ರದೀಪ್ ರಾಯ್ ಈ ವಿಷಯವನ್ನು ಎಎನ್ ಐ ಸುದ್ದಿ ಸಂಸ್ಥೆಗೆ ಖಚಿತ ಪಡಿಸಿದ್ದಾರೆ.
ಸಚಿನ್ ತೆಂಡೂಲ್ಕರ್ ಅವರಿಗೆ ತಾವು ಮೇಲ್ ಮಾಡಿದ್ದು, ಸ್ಪಾನ್ಸರ್ ಶಿಪ್ ಗಾಗಿ ಹಣ ನೀಡಬೇಕೆಂದು ಮನವಿ ಮಾಡಲಾಗಿತ್ತು ಎಂದು ಹೇಳಿದ್ದಾರೆ.
ಮೂರು ದಿನಗಳ ನಂತರ ನಮ್ಮಮ್ಮಿ ಸಂಪರ್ಕಿಸಿದ ಸಚಿನ್, ಕೆಲ ಪ್ರಶ್ನೆಗಳನ್ನು ಕೇಳಿ, ಹಣ ನೀಡಿದ್ದಾರೆ, ಅವರು ನೀಡಿದ ಹಣದಿಂದ ನಮಗೆ ಬಹು ದೊಡ್ಡ ಮಟ್ಟದಲ್ಲಿ ಸಹಾಯವಾಗಲಿದೆ ಎಂದು ಹೇಳಿದ್ದಾರೆ.
ಇನ್ನೂ ತಮ್ಮ ತಂಡ ಏಷ್ಯಾ ಕಪ್ ನಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ನೀಡುವಲ್ಲಿ ಸಿದ್ಧತೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.